ವೀರಶೈವ ಮಹಾಸಭಾ ಸುರಪುರ ತಾಲೂಕು ಘಟಕಕ್ಕೆ ಪದಾಧಿಕಾರಿಗಳ ನೇಮಕ

0
19

ಸುರಪುರ: ಅಖಿಲ ಭಾರತ ವೀರಶೈವ ಮಹಾಸಭಾದ ಸುರಪುರ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆಗೊಳಿಸಲಾಯಿತು.

ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಸಮಿತಿಯು ಎಲ್ಲಾ ಜಿಲ್ಲಾ ಮತ್ತು ತಾಲೂಕು ಘಟಕಕ್ಕೆ ಪದಾಧಿಕಾರಿಗಳ ನೇಮಕಕ್ಕಾಗಿ ಚುನಾವಣೆ ಘೋಷಣೆಯಾಗಿತ್ತು,ಆದರೆ ತಾಲೂಕಿನ ಎಲ್ಲಾ ಮುಖಂಡರು ಸಭೆ ನಡೆಸಿ ಪದಾಧಿಕಾರಿಗಳನ್ನು ಅವಿರೋಧವಾಗಿ ನೇಮಕಗೊಳಸಿದರು.

Contact Your\'s Advertisement; 9902492681

ತಾಲೂಕು ಘಟಕದ ಗೌರವಾಧ್ಯಕ್ಷರಾಗಿ ಹಿರಿಯ ಮುಖಂಡ ಶರಣಪ್ಪ ಕಲಕೇರಿಯವರನ್ನು ನೇಮಕಗೊಳಿಸಲಾಯಿತು,ಅಲ್ಲದೆ ಅಧ್ಯಕ್ಷರಾಗಿ ಮಂಜುನಾಥ ಎಂ.ಜಾಲಹಳ್ಳಿ ಉಪಾಧ್ಯಕ್ಷರಾಗಿ ಜಯಲಲಿತಾ ಪಾಟೀಲ್ ಜಗದೀಶ ಸೊನ್ನದ್ ಕೆಂಭಾವಿ ಹಾಗು ಸಿದ್ದನಗೌಡ ಪಾಟೀಲ್ ಹೆಬ್ಬಾಳ ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ ಅಂಗಡಿ ಕನ್ನೆಳ್ಳಿ ಹಾಗು ಕಾರ್ಯದರ್ಶಿಗಳಾಗಿ ಮಲ್ಲಿಕಾರ್ಜುನರಡ್ಡಿ ಕೋಳಿಹಾಳ ಅಮ್ಮಾಪುರ ಕವಿತಾ ರೇವಡಿ ಹುಣಸಗಿ ಹಾಗು ಅಂಬ್ರೇಶ ಕುಂಬಾರ ಮತ್ತು ಕೋಶಾಧ್ಯಕ್ಷರನ್ನಾಗಿ ಬಸವರಾಜ ಬೂದಿಹಾಳ ಅವರನ್ನು ನೇಮಕಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ಜಮದ್ರಖಾನಿ ಸುರೇಶ ಸಜ್ಜನ್ ಎಸ್.ಎಮ್.ಕನಕರಡ್ಡಿ ಜಿ.ಎಸ್.ಪಾಟೀಲ್ ಸಂಗಣ್ಣ ಎಕ್ಕೆಳ್ಳಿ ಸೂಗುರೇಶ ವಾರದ್ ಸೋಮಶೇಖರ ಶಾಬಾದಿ ಪ್ರಕಾಶ ಸಜ್ಜನ್ ಡಿ.ಸಿ.ಪಾಟೀಲ್ ಕೆಂಭಾವಿ ರವಿಗೌಡ ಹೆಮನೂರ ಪ್ರದೀಪ ಕದರಾಪುರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here