ಪೇಠ ಅಮ್ಮಾಪುರ ಗ್ರಾಮ ಪಂಚಾಯತಿ ಅಧ್ಯಕ್ಷೆಗೆ ತಾಲೂಕು ಬಣಜಿಗ ಸಮಾಜ ಸನ್ಮಾನ

0
142

ಸುರಪುರ: ತಾಲೂಕಿನ ಪೇಠ ಅಮ್ಮಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಸ್ಸಮ್ಮ ದಿ:ಬಸಲಿಂಗಪ್ಪ ಸಾಹುಕಾರ ಅವರಿಗೆ ಕಲ್ಯಾಣ ಕರ್ನಾಟಕ ಪಂಚಮಸಾಲಿ ಸಮುದಾಯದ ಬಣಜಿಗರ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವೀರಶೈವ ಲಿಂಗಾಯತ ಸಮುದಾಯದ ಹಿರಿಯ ಮುಖಂಡ ಶಿವರಾಜಪ್ಪ ಗೋಲಗೇರಿ ಮಾತನಾಡಿ,ನಮ್ಮ ಸಮುದಾಯ ರಾಜಕೀಯವಾಗಿ ಇನ್ನೂ ಬೆಳವಣಿಗೆ ಕಾಣಬೇಕಿದೆ ಅದಕ್ಕೆ ನಮ್ಮ ಒಗ್ಗಟ್ಟು ತುಂಬಾ ಮುಖ್ಯವಾಗಿದೆ ಎಂದರು.ಅಲ್ಲದೆ ತಾಲೂಕಿನಲ್ಲಿ ಪೇಠ ಅಮ್ಮಾಪುರ ಗ್ರಾಮ ಪಂಚಾಯತಿಗೆ ನಮ್ಮ ಪಂಚಮಸಾಲಿ ಸಮುದಾಯದ ಬಣಜಿಗ ಸಮಾಜದ ಹಿರಿಯರು ಅಧ್ಯಕ್ಷರಾಗಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ.ತಮ್ಮಿಂದ ಪೇಠ ಅಮ್ಮಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಸರ್ವಾಂಗಿಣ ಅಭಿವೃಧ್ಧಿ ಕಾಣಲಿ ಹಾಗು ತಮ್ಮ ಆಡಳಿತವು ಇನ್ನೂ ಅನುಗಾಲ ಪೇಠ ಅಮ್ಮಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನತೆ ನೆನಪಲ್ಲಿಟ್ಟುಕೊಳ್ಳುವಂತಾಗಲಿ ಎಂದು ಹಾರೈಸುವುದಾಗಿ ತಿಳಿಸಿದರು.

Contact Your\'s Advertisement; 9902492681

ನಂತರ ಅಧ್ಯಕ್ಷರಾಗಿ ನೇಮಕಗೊಂಡ ಬಸಮ್ಮ ದಿ:ಬಸಲಿಂಗಪ್ಪ ಸಾಹುಕಾರ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಮುಖಂಡರಾದ ಶಿವು ಸಾಹುಕಾರ ರಾಜಶೇಖರ ತಂಬಾಕೆ ಶಿವುಗೌಡ ಸೂಗುರ್ ಶರಣು ಸಾಹುಕಾರ ಚನ್ನಬಸವ ವಾಲಿ ಸಿದ್ದು ಮುಧೋಳ ಜಗದೀಶ ತಂಬಾಕೆ ಸಜ್ಜನ್‌ಕುಮಾರ ಕಲ್ಯಾಣಶೆಟ್ಟಿ ಅಂಬರೀಶ ದೇಸಾಯಿ ಬಸವರಾಜ ಬಿರಾದಾರ್ ಶಿವಲಿಂಗಪ್ಪ ಶೆಟ್ಟಿ ಅಮ್ಮಾಪುರ ಗುರುಪಾದಪ್ಪ ಬೇವಿನಗಿಡ ಅನಿಲ್ ಶೆಟ್ಟಿ ಬಸವಣಪ್ಪ ಹಂಗರಗಿ ಒಕ್ಕೂಟದ ಸಂಚಾಲಕ ನಾಗಭೂಷಣ ಯಾಳಗಿ ರವಿಕುಮಾರ ಶೆಟ್ಟಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here