ಬಿಜೆಪಿ ಕಚೇರಿಯಲ್ಲಿ ಸಂತ ಸೇವಾಲಾಲ ಮಹಾರಾಜರ ಜಯಂತಿ

0
52

ಶಹಾಬಾದ: ಸಂತ ಸೇವಾಲಾಲ ಮಹಾರಾಜರ ತತ್ವಾದರ್ಶ,ಉದಾತ್ತ ಚಿಂತನೆಗಳು ಸಮಾಜಕ್ಕೆ  ಪರಿವರ್ತನೆಗೆ ಪೂರಕವಾಗಿವೆ ಎಂದು ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ಹೇಳಿದರು.

ಅವರು ಸೋಮವಾರ ನಗರದ ಬಿಜೆಪಿ ಕಛೇರಿಯಲ್ಲಿ ಬಿಜೆಪಿಯಿಂದ ಆಯೋಜಿಸಲಾದ ಸಂತ ಸೇವಾಲಾಲ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಬಂಜಾರಾ ಸಮಾಜ ಭವ್ಯ ಹಾಗೂ ಶ್ರೀಮಂತ ಸಂಸ್ಕೃತಿ ಹೊಂದಿದೆ.ವೈಭವಯುತ ಪರಂಪರೆ,ಸಂಸ್ಕೃತಿ ಉಳಿಸಿಕೊಂಡು ಬಂದಿದೆ.ಮುಂದೆಯೂ ಇದೇ ರೀತಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದ ಅವಶ್ಯಕತೆಯಿದೆ. ಸಂತ ಸೇವಾಲಾಲರ ಜಯಂತಿಯ ಕೇವಲ ಕಾಟಾಚಾರಕ್ಕಾಗದೇ ಅರ್ಥಪೂರ್ಣವಾಗಿ ಆಚರಿಸಬೇಕು. ಅಲ್ಲದೇ

ಸಂತ ಸೇವಾಲಾಲರ ಆದರ್ಶಗಳನ್ನು ಮೈಗೂಡಿಕೊಂಡು ಜೀವನ ನಡೆಸುವ ಮೂಲಕ ಅವರಿಗೆ ನಿಜವಾದ ಗೌರವ ಸಲ್ಲಿಸಬೇಕೆಂದು ಹೇಳಿದರು. ಬಿಜೆಪಿ ಮುಖಂಡರಾದ ಸೂರ್ಯಕಾಂತ ವಾರದ, ಶಂಕರ ಭಗಾಡೆ,ರವಿ ರಾಠೋಡ,ರಾಜು ದಂಡಗುಲಕರ್, ಶಶಿಕಲಾ ಸಜ್ಜನ್, ಜಯಶ್ರೀ ಸೂಡಿ,ಪಾರ್ವತಿ ಪವಾರ,ದತ್ತಾ ಫಂಡ್, ಶರಣಬಸಪ್ಪ ನಂದಿ, ಮಹಾದೇವ ಗೊಬ್ಬೂರಕರ್ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here