ಗ್ರಾಪಂ ಪಿಡಿಓ ಅವರಿಂದ ಹಣ ದುರ್ಬಳಕೆ: ತನಿಖೆಗೆ ಆಗ್ರಹ

2
165

ಶಹಾಬಾದ: ತೊನಸನಹಳ್ಳಿ(ಎಸ್) ಗ್ರಾಪಂ ಪಿಡಿಓ ಅವರು ಗ್ರಾಪಂ ಹಣವನ್ನು ದುರ್ಬಳಕೆ ಹಾಗೂ ಅವ್ಯವಹಾರ ಮಾಡಿದ್ದು, ಅದರ ಬಗ್ಗೆ ತನಿಖೆ ನಡೆಸಬೇಕೆಂದು ಗ್ರಾಪಂ ಸದಸ್ಯ ಮಹ್ಮದ್ ಫಯಾಜ್ ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ತೊನಸನಹಳ್ಳಿ(ಎಸ್) ಗ್ರಾಪಂ ಪಿಡಿಓ ಪ್ರಕಾಶ ಬಾಬು ಅವರು ೯ ತಿಂಗಳುಗಳಿಂದ ನಮ್ಮ ಗ್ರಾಪಂಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ೧೪ನೇ ಮತ್ತು ೧೫ನೇ ಹಣಕಾಸು ಯೋಜನೆ ಹಾಗೂ ಮನೆ ಕರ ವಸೂಲಿಯ ಖಾತೆಗಳಿಂದ ಲಕ್ಷಾಂತರ ಹಣ ಅವ್ಯವಹಾರ ಮಾಡಿದ್ದಾರೆ.ಈವರೆಗೆ ಅವರು ಯೋಜನೆಗಳಲ್ಲಿ ಖರ್ಚು ಮಾಡಿದ ವಿವರ ಕೇಳಿದರೂ ನೀಡುತ್ತಿಲ್ಲ.

Contact Your\'s Advertisement; 9902492681

ಅಲ್ಲದೇ ಫೆಬ್ರವರಿ ೪ ರಂದು ಅವರಿಗೆ ಕರೆ ಮಾಡಿದರೇ, ಅವರು ರಜೆಯಲ್ಲಿ ಇರುವುದಾಗಿ ತಿಳಿಸಿದ್ದಾರೆ.ಆದರೆ ಅದೇ ದಿನದಂದು ಲಕ್ಷಾಂತರ ರೂ. ಬ್ಯಾಂಕಿನಿಂದ ಡ್ರಾ ಮಾಡಿಕೊಂಡಿದ್ದಾರೆ.ಅಲ್ಲದೇ ಅಂಗವಿಕಲರಿಗೆ ನೀಡಬೇಕಾದ ಯಾವುದೇ ಸವಲತ್ತುಗಳು ಇಂದಿಗೂ ನೀಡಿಲ್ಲ.ಆದರೆ ಅದರ ಹಣವನ್ನು ಬಳಸಿಕೊಳ್ಳಲಾಗಿದೆ.

ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರು ಭರ್ತಿ ಮಾಡುತ್ತಿಲ್ಲ: ಜಗನ್ನಾಥ.ಎಸ್.ಹೆಚ್

ಆದ್ದರಿಂದ ಕೂಡಲೇ ಈ ಬಗ್ಗೆ ತನಿಖೆ ನಡೆಸಿ, ದುರುಪಯೋಗಪಡಿಸಿಕೊಂಡ ಹಣವನ್ನು ಮತ್ತೆ ಸರ್ಕಾರಕ್ಕೆ ಜಮಾ ಮಾಡಬೇಕು.ಅಂಗವಿಕಲರ ಸೌಲಭ್ಯಗಳನ್ನು ನೀಡಬೇಕು.ಇಲ್ಲದಿದ್ದರೇ ಪ್ರತಿಭಟನೆ ಹಮ್ಮಿಕೊಳ್ಳುತ್ತೆವೆ ಎಂದು ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಿದ ಪತ್ರದಲ್ಲಿ ತಿಳಿಸಿದ್ದಾರೆ.

ಕೋವಿಡ್ ಲಸಿಕೆಗಳು ಸಂಪೂರ್ಣ ಸುರಕ್ಷಿತ,ಯಾರೂ ಭಯಪಡಬೇಕಿಲ್ಲ: ಡಿಸಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here