ವಾಡಿ: ಸಮೀಪದ ಇಂಗಳಗಿ ಗ್ರಾಮದ ಭೀಮನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಮೇಲುಸ್ತೂವಾರಿ ಸಮಿತಿ (ಎಸ್ಡಿಎಂಸಿ) ರಚನೆ ಮಾಡಲಾಯಿತು.
ಗ್ರಾಮದ ಮುಖಂಡ ಮಾಳಗಪ್ಪ ಹಿಂದಿನಕೇರಿ ಹಾಗೂ ಮುಖ್ಯಶಿಕ್ಷಕ ರೇವಣಸಿದ್ದಯ್ಯ ಅವರ ಸಮ್ಮುಖದಲ್ಲಿ ಶುಕ್ರವಾರ ನಡೆದ ಪೋಷಕರ ಸಭೆಯಲ್ಲಿ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು, ನಾಗಪ್ಪ ಸಂಗನ್ (ಅಧ್ಯಕ್ಷ). ಸುಲೋಚನಾ ಸುರೇಶ ಹಿಂದಿನಕೇರಿ (ಉಪಾಧ್ಯಕ್ಷೆ). ಸದಸ್ಯರಾಗಿ ಜಗನ್ನಾಥ ಹಂದರ್ಕಿ, ತಿಪ್ಪಣ್ಣ ಹಿಂದಿನಕೇರಿ, ಲಕ್ಷ್ಮಣ ಸಂಕಾ, ಚಂದ್ರಲಿಂಗ ಮಲ್ಲಪ್ಪ, ಸಂತೋಷ ಸಂಕಾ, ಮರೆಮ್ಮ ಬಸವರಾಜ ಬಳವಡಗಿ, ಶಾಮಬಾಯಿ, ಮಲ್ಲಮ್ಮ ಬಾಬು ಮಂದೇವಾಲ, ಸುಮಂಗಲಾ ಮಲ್ಲಪ್ಪ ಹಿಂದಿನಕೇರಿ, ಶಾಂತಮ್ಮ ಜೈಭೀಮ ಆಯ್ಕೆಯಾದರು. ಪ್ರಜ್ವಲ್ ವಿದ್ಯಾರ್ಥಿ ಪ್ರತಿನಿಧಿಯಾದರು.