ಮೂರು ಪುಸ್ತಕಗಳ ಲೋಕಾರ್ಪಣೆ ನಾಳೆ

0
37

ಕಲಬುರಗಿ: ಹಿರಿಯ ಪತ್ರಕರ್ತ ಪ್ರಭುಲಿಂಗ ನೀಲೂರೆ ಅವರ ಮೂರು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ಫೆ.೨೧ರಂದು ಬೆಳಗ್ಗೆ ೧೧ಗಂಟೆಗೆ ನಗರದ ಕನ್ನಡ ಸಾಹಿತ್ಯ ಪರಿಷತ್‌ನ ಸುವರ್ಣಭವನದಲ್ಲಿ ನಡೆಯಲಿದೆ.

ಸುಬೇದಾರ ರಾಮಜಿ ಸಕ್ಪಾಲ್, ಹಿಂಗ್ಯಾಕಂತಾರೆ ಹಾಗೂ ಮನಸೇ…ಬದುಕು ನಿನಗಾಗಿ ಈ ಮೂರು ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ,ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಪುಸ್ತಕಗಳ ಲೋಕಾರ್ಪಣೆಗೊಳಿಸಲಿದ್ದಾರೆ.

Contact Your\'s Advertisement; 9902492681

ಎಸಿಸಿ ಅಧಿಕಾರಿಗಳ ಬಂಧನಕ್ಕೆ ವಾಲ್ಮೀಕಿ ಸಮಾಜ ಒತ್ತಾಯ

ಅತಿಥಿಗಳಾಗಿ ಗುಲ್ಬರ್ಗ ವಿವಿಯ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೋ.ಎಚ್.ಟಿ.ಪೋತೆ, ದಿಶಾ ಪಿಯು ವಿಜ್ಞಾನ ಕಾಲೇಜು ಕಲಬುರಗಿ ಚೇರ್ಮನ್ ಶಿವಾನಂದ ಖಜೂರಗಿ, ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ದೇವಯ್ಯ ಗುತ್ತೇದಾರ್ ಪಾಲ್ಗೊಳ್ಳಲಿದ್ದಾರೆ. ಹಿರಿಯ ಸಾಹಿತಿ ಡಾ.ಸೂರ್ಯಕಾಂತ್ ಸುಜ್ಯಾತ್, ಕಾವ್ಯಶ್ರೀ ಮಹಾಗಾಂವಕರ್ ಪುಸ್ತಕ ಪರಿಚಯ ಮಾಡಲಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here