ದೇಶದಲ್ಲಿನ ದಲಿತರ ಸ್ಥಿತಿ ಚಿಂತಾಜನಕವಾಗಿದೆ ಹೋರಾಟಕ್ಕೆ ಮುಂದಾಗೋಣ: ಕಟ್ಟಿಮನಿ

0
14

ಸುರಪುರ: ದೇಶದಲ್ಲಿನ ದಲಿತರ ಸ್ಥಿತಿ ನಿತ್ಯವು ಚಿಂತಾಜನಕವಾಗುತ್ತಿದೆ ಇದಕ್ಕಾಗಿ ನಾವೆಲ್ಲರು ಸಂಘಟಿತರಾಗಿ ಹೋರಾಟಕ್ಕೆ ಮುಂದಾಗಬೇಕಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎನ್.ಮೂರ್ತಿ ಸ್ಥಾಪಿತ) ಸಂಘಟನೆಯ ಜಿಲ್ಲಾಧ್ಯಕ್ಷ ಹಣಮಂತ ಕಟ್ಟಿಮನಿ ಬೊಮ್ಮನಹಳ್ಳಿ ಮಾತನಾಡಿದರು.

ನಗರದ ಟೈಲರ್ ಮಂಜಿಲ್‌ನಲ್ಲಿ ನಡೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ,ನಮ್ಮ ರಾಜ್ಯದಲ್ಲಿ ಮೊದಲಿಗೆ ದಲಿತ ಸಂಘರ್ಷ ಸಮಿತಿಯನ್ನು ಕಟ್ಟುವ ಮೂಲಕ ಎಲ್ಲರಲ್ಲಿ ಹೋರಾಟದ ಕಿಚ್ಚು ಮೂಡಿಸಿದ ಕೀರ್ತಿ ಪ್ರೋ ಬಿ.ಕೃಷ್ಣಪ್ಪನವರಿಗೆ ಸಲ್ಲುತ್ತದೆ.ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಮ್ಮನ್ನೆಲ್ಲ ಸಂಘಟನೆಯೊಂದಿಗೆ ತೊಡಗಿಸಿಕೊಂಡು ದೇಶದಲ್ಲಿನ ದಲಿತರ ಪರವಾಗಿ ಧ್ವನಿ ಎತ್ತುವಂತೆ ಮಾಡಿದ ಕೀರ್ತಿ ನಮ್ಮ ಸಂಘಟನೆಯ ಸಂಸ್ಥಾಪಕರಾದ ಎನ್.ಮೂರ್ತಿ ಯವರಿಗೆ ಸಲ್ಲುತ್ತದೆ.ಇಂತಹ ಸಂಘಟನೆಗೆ ತಾವೆಲ್ಲರು ಸೇರ್ಪಡೆಗೊಂಡಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ ಎಂದರು.

Contact Your\'s Advertisement; 9902492681

ಶರಣಬಸವೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಾಚಿಗೆ ಯುವ ವಿಜ್ಞಾನಿ ಪ್ರಶಸ್ತಿ

ಇದೇ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಹಣಮಂತ ದೊಡ್ಮನಿ ಬೋನಾಳ ಸೋಮು ಆಲ್ದಾಳ ಭೀಮಪ್ಪ ಕೊಡೇಕಲ್ ದುರ್ಗಪ್ಪ ಮಾಲಗತ್ತಿ ಪರಮಣ್ಣ ದೊಡ್ಮನಿ ಬಸಪ್ಪ ದೊಡ್ಮನಿ ಮರೆಪ್ಪ ದೊಡ್ಮನಿ ಮುದಕಪ್ಪ ಕೊಡೇಕಲ್ ಚಂದಪ್ಪ ಸುರಪುರ ಮಲ್ಲಪ್ಪ ದೊಡ್ಮನಿ ಸೇರ್ಪಡೆಗೊಂಡರು.ಎಲ್ಲರಿಗೂ ಹೂಮಾಲೆ ಹಾಕಿ ಬರಮಾಡಿಕೊಳ್ಳಲಾಯಿತು.

ಸಭೆಯಲ್ಲಿ ಮುಖಂಡರಾದ ಪಂಡೀತ ನಿಂಬೂರ ಹಯ್ಯಾಳಪ್ಪ ಗುತ್ತೇದಾರ ಜಾಲಿಬೆಂಚಿ ಹಣಮಂತ ಬಿಲ್ಲವ್ ಮಲ್ಲಿಕಾರ್ಜುನ ಮಂದಾಲೆ ದುರ್ಗಪ್ಪ ನಾಗರಾಳ ಭೀಮಣ್ಣ ದೀವಳಗುಡ್ಡ ನಾಗರಾಜ ಓಕಳಿ ಹಾಗು ಭೀಮಣ್ಣ ಹುಲಕಲ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here