ಡಾ: ಈಶ್ವರಯ್ಯ ಮಠ ಜೀವನ ಸಾಧನೆ ನೆನಪೇ ನಂದಾದೀಪ ಕೃತಿ ಬಿಡುಗಡೆ ಕಾರ್ಯಕ್ರಮ

1
37

ಸುರಪುರ: ಕಳೆದ ಕೆಲ ತಿಂಗಳುಗಳ ಹಿಂದೆ ಲಿಂಗೈಕ್ಯರಾಗಿರುವ ಖ್ಯಾತ ಸಾಹಿತಿಗಳು ಹಾಗು ಚಿಂತಕರಾದ ಡಾ:ಈಶ್ವರಯ್ಯ ಮಠದ ಜೀವನ ಮತ್ತು ಸಾಹಿತ್ಯದ ಕುರಿತು ಹಾಗು ನೆನಪೇ ನಂದಾದೀಪ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಸುವ ಕುರಿತು ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ಅನೇಕರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು ಮಾತನಾಡಿ,ಡಾ: ಈಶ್ವರಯ್ಯ ಮಠ ಅವರು ನಾಡು ಕಂಡ ಮಹಾನ್ ಮೇಧಾವಿ ಚಿಂತಕರಲ್ಲಿ ಒಬ್ಬರಾಗಿದ್ದರು,ಆದ್ದರಿಂದ ಅವರ ನೆನಪಿನಲ್ಲಿ ನಡೆಯುವ ಕಾರ್ಯಕ್ರಮ ತುಂಬಾ ಸರಳ ಮತ್ತು ಅರ್ಥಪೂರ್ಣವಾಗಿ ನಡೆಸೋಣ ಎಂದರು.

Contact Your\'s Advertisement; 9902492681

ನೂರಾರು ಕೂಲಿಕಾರರಿಂದ ತಾಲೂಕು ಪಂಚಾಯತಿಗೆ ಮುತ್ತಿಗೆ

ಅಲ್ಲದೆ ಅವರ ಒಡನಾಡಿಗಳು ಸಹೋದ್ಯೋಗಿಗಳು ಅವರ ಆಪ್ತರು ಮತ್ತು ಅವರ ಕುಟುಂಬ ಸದಸ್ಯರ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ನಡೆಸೋಣ.ಅವರ ಸಮಾಧಿ ಸ್ಥಳವಿರುವ ದೇವರಗೋನಾಲದ ಈಶ್ವರ ವಿಹಾರದಲ್ಲಿಯೇ ಕಾರ್ಯಕ್ರಮವನ್ನು ನಡೆಸುವ ಕುರಿತು ಹಾಗು ನಾಡಿನ ಖ್ಯಾತ ಚಿಂತಕರನ್ನು ಕರೆಯಿಸುವ ಮತ್ತು ಕಾರ್ಯಕ್ರಮದ ಉದ್ಘಾಕರನ್ನಾಗಿ ಮಾಜಿ ಕೆಪಿಎಸ್ಸಿ ಮುಖ್ಯಸ್ಥರಾಗಿದ್ದ ಹಾಗು ಈಶ್ವರ ಮಠರ ಮಾರ್ಗದರ್ಶಕರಂತಿದ್ದ ಭೀಮಪ್ಪ ಗೋನಾಲರನ್ನು ಆಹ್ವಾನಿಸುವುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು.ಅಲ್ಲದೆ ಕಾರ್ಯಕ್ರಮದ ದಿನಾಂಕವನ್ನು ಶೀಘ್ರದಲ್ಲಿ ಘೋಷಣೆ ಮಾಡುವುದಾಗಿ ತಿಳಿಸಿದರು.

ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀನಿವಾಸ ಜಾಲವಾದಿ, ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ಬಸವರಾಜ ಜಮದ್ರಖಾನಿ ಹಿರಿಯ ಸಾಹಿತಿಗಳಾದ ಶಾಂತಪ್ಪ ಬೂದಿಹಾಳ ನಬಿಲಾಲ ಮಕಾಂದಾರ ಶರಣಗೌಡ ಪಾಟೀಲ್ ಶರಣಬಸಪ್ಪ ಯಾಳವಾರ ಎಮ್.ಎಸ್.ಹಿರೇಮಠ ಶಿವಕುಮಾರ ಅಮ್ಮಾಪುರ ಬಲಭೀಮ ದೇಸಾಯಿ ದೇವರಗೋನಾಲ ಮಹಾಂತೇಶ ಗೋನಾಲ ಕುತಬುದ್ದಿನ್ ಅಮ್ಮಾಪುರ ಗೋಪಣ್ಣ ಯಾದವ್ ಮಾನಯ್ಯ ಗೋನಾಲ ಸಿದ್ದಯ್ಯಸ್ವಾಮಿ ಸ್ಥಾವರಮಠ ಸೇರಿದಂತೆ ಅನೇಕ ಜನರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here