ಅನುಮಾನಸ್ಪದ ವ್ಯಕ್ತಿಯ ಕೊಲೆ: ನಾಲ್ವರ ಬಂಧನ

1
152

ಕಲಬುರಗಿ: ಆಳಂದ ತಾಲ್ಲೂಕಿನ ನಿಂಬರ್ಗಾ ಸಿಮಾಂತರದ ಹೊಲವೊಂದರಲ್ಲಿ ಅನುಮಾನಸ್ಪದವಾಗಿ ಹತ್ಯೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಂಬರ್ಗಾ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಡದಾಳ ಗ್ರಾಮದ ನಿವಾಸಿಗಳಾದ ಹುಚ್ಚಪ್ಪ ಶಿವಪ್ಪ ಬಸರಿಗಿಡ, ಲಾಡಪ್ಪಾ ಮಹಾದೇವಪ್ಪಾ ಉದಯಕರ್, ಬಸವರಾಜ್ ಶರಣಪ್ಪ ಸಿಂಗೆ ಘತರಗಿ ಹಾಗೂ ಧಂಗಾಪುರ ಗ್ರಾಮದ ಚಂದ್ರಕಲಾ ರವಿ ನಿಲೂರ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

Contact Your\'s Advertisement; 9902492681

ಡಬಲ್‌ ಇಂಜಿನ್ ಸರ್ಕಾರದಿಂದಾಗಿ ಕಕ ಭಾಗಕ್ಕೆ ಗ್ರಹಣ: ಶಾಸಕ ಖರ್ಗೆ

ಕೊಲೆಯಾದ ರವಿ ಸುಭಾಷ್ ಅವರ ಹೆಂಡತಿಯ ಜೊತೆ ಆರೋಪಿ ಹುಚ್ಚಪ್ಪ ಅನೈತಿಕ ಸಂಬಂಧ ಬೆಳೆಸಿದ ಈ ಹಿನ್ನೆಲೆಯಲ್ಲಿ ಕೊಲೆ ಮಾಡಿ ಆರೋಪಿಗಳು ತಲೆ ಮರಿಕೊಂಡಿದರು ಎಂದು ಪೊಲೀಸರು ತನಿಖೆಯಲ್ಲಿ ತಿಳಿಸಿದ್ದಾರೆ.

ಹೆಚ್ಚುವರಿ ಪೊಲೀಸ್ ಅಧೀಕ್ಷರಾದ ಪ್ರಸನ್ನ ದೇಸಾಯಿ ಅವರ ಮಾರ್ಗದರ್ಶನದ ಉಪಾಧೀಕ್ಷಕರಾದ ಮಲ್ಲಿಕಾರ್ಜುನ್ ಸಾಲಿ ನೇತೃತ್ವದ ಸಿಪಿಐ ಮಂಜುನಾಥ್ ಎಸ್, ಪಿಎಸ್ಐ ಸುವರ್ಣಾ, ಸಿಬ್ಬಂದಿಗಳಾದ ಶಂಕರ್, ಮಲ್ಲಗೊಂಡ, ಮಲ್ಲಿಕಾರ್ಜುನ್ ಗೋಟುರ, ರಮೇಶ್, ಶ್ರೀಕಾಂತ, ಶರಣಮ್ಮಾ ಮಪಿಸಿ ಹಾಗೂ ಭಿಮಾಶಂಕರ್ ತನಿಖಾ ತಂಡದಿಂದ ಯಶಸ್ವಿ ಕಾರ್ಯಾಚರಣೆ ನಡೆದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here