ಸಾಹಿತ್ಯ ಸಿಂಧು ಪ್ರಶಸ್ತಿ ಪ್ರದಾನ

1
35

ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಅಡಕಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಚಂದ್ರಕಲಾ ಎಂ ಪಾಟೀಲ ಸೇರಿ ಒಟ್ಟು ೩೨ ಜನರಿಗೆ ಸಾಹಿತ್ಯ ಸಿಂಧು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಬರಹಗಾರರ ಬಳಗ ರಾಜ್ಯ ಘಟಕ ಕೊಡ ಮಾಡುವ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಹೊಸಪೇಟೆ ಪಟ್ಟಣದಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಿ ಗೌರವಿಸಲಾಗಿದೆ.

ಮಾಜಿ ಸೈನಿಕನ ಮೇಲಿನ ಹಲ್ಲೆಗೆ ಸಿಡಿದೆದ್ದ ಸೈನಿಕರು

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಆಯೋಜಿಸಿದ ಕವಿಗೋಷ್ಠಿಯಲ್ಲಿ ಶಿಕ್ಷಕಿ ಸಂಗಮ್ಮ ದರ್ಮುರಕರ್ ಭಾಗವಹಿಸಿ ಸ್ವರಚಿತ ಕವನ ವಾಚಿಸಿದರು. ಸಮಾರಂಭದಲ್ಲಿ ಬಳಗದ ರಾಜ್ಯಧ್ಯಕ್ಷೆ ಮಧು ನಾಯಕ ಎಲ್, ಶಾಸಕ ಆನಂದ ಸಿಂಗ್ ಹಾಗೂ ಇತರರಿದ್ದರು.

ಎಸ್ಸಿ ಎಸ್ಟಿ ನಿಮಗಳಿಗೆ ಅನುದಾನ ಹೆಚ್ಚಿಸಲು ಆಗ್ರಹಿಸಿ ಶಾಸಕ ರಾಜುಗೌಡ ಮನೆ ಮುಂದೆ ಪ್ರತಿಭಟನೆ

ಪ್ರಶಸ್ತಿ ಪಡೆದ ಚಂದ್ರಕಲಾ ಪಾಟೀಲ ಅವರಿಗೆ ಕಲಬುರಗಿ ಜಿಲ್ಲಾ ಬರಹಗಾರರ ಬಳಗ ಅಧ್ಯಕ್ಷ ಮಹಾತೇಶ ಪಾಟೀಲ, ಸಂಚಾಲಕ ಧರ್ಮಣ್ಣ ಧನ್ನಿ ಹಾಗೂ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here