೧೫೦ ದಿನಗಳ ಕೂಲಿ ನೀಡಿದ ಪಂಚಾಯತಿ ಅಧಿಕಾರಿಗಳಿಗೆ ಧನ್ಯವಾದ-ಸೋಮು ಆಲ್ದಾಳ

0
15

ಸುರಪುರ: ತಾಲೂಕಿನ ಆಲ್ದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿನ ಕೂಲಿ ಕಾರ್ಮಿಕರಿಗೆ ೧೫೦ ದಿನಗಳ ಕೂಲಿ ಕೆಲಸ ನೀಡಿ ಕಾರ್ಮಿಕರಿಗರ ನೆರವಾದ ಪಂಚಾಯತಿ ಅಧಿಕಾರಿಗಳಿಗೆ ಮತ್ತು ಮುಖಂಡರಿಗೆ ಕೂಲಿಕಾರರ ಪರವಾಗಿ ಧನ್ಯವಾದ ಅರ್ಪಿಸುವುದಾಗಿ ಕಾರ್ಮಿಕ ಮುಖಂಡ ಸೋಮು ಕಟ್ಟಿಮನಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ಕೊರೊನಾ ಸಂದರ್ಭದಲ್ಲಿ ಅನೇಕ ಪಂಚಾಯತಿಗಳಲ್ಲಿ ಕಾರ್ಮಿಕರಿಗೆ ಸರಿಯಾದ ಕೆಲಸ ನೀಡಿಲ್ಲ ಎಂದು ಆರೋಪಗಳಿರುವಾಗ ನಮ್ಮ ಆಲ್ದಾಳ ಗ್ರಾಮ ಪಂಚಾಯತಿ ಅಭೀವೃಧ್ಧಿ ಅಧಿಕಾರಿ ರಾಜಕುಮಾರ ಮತ್ತು ಮುಖಂಡರಾದ ವೈಜನಾಥ ಸಾಹುಕಾರ ಹಾಲಿ ಪಂಚಾಯತಿ ಅಧ್ಯಕ್ಷರಾದ ಈರಮ್ಮ ಮತ್ತು ವಿಜಯ ಕುಮಾರ ಕಂಪೂಟರ್ ಆಪರೇಟರ್ ರಾಮಚಂದ್ರ ಜಿ.ಪಿ.ಎಸ್ ಸಿಬ್ಬಂದಿ ಹಣಮಂತ ಮತ್ತು ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರ ಸಹಕಾರದಿಂದ ಕೂಲಿಕಾರರಿಗೆ ಕೆಲಸ ನೀಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here