ರೈತ ಮುಖಂಡ, ಸಮಾಜ ಸೇವಕ, ಕಾಯಕಯೋಗಿ ಲಿಂ.ಮಲ್ಕಣ್ಣಗೌಡರ ಪುಣ್ಯೆಸ್ಮರಣೆ ದಿನ

0
221

ಕಲಬುರಗಿ : ಸಮಾಜಸೇವೆ ಅವರ ಆದರ್ಶ, ರೈತ ನಾಯಕರು, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮ ಚಿಂತಕರು, ನಮ್ಮ ಕಲ್ಲೂರ ಕೆ ಗ್ರಾಮದ ಹಿರಿಯ ಮುಖಂಡರಾಗಿದ ಲಿಂ.ಮಲ್ಕಣ್ಣಗೌಡ ಪೊಲೀಸ್ ಪಾಟೀಲ್ 21 ನೇಯ ವರ್ಷದ ಸ್ಮರಣೋತ್ಸವ ದಿನ.

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಲ್ಲೂರ ಕೆ ಗ್ರಾಮದ ಅವಿಭಕ್ತ ಕುಟುಂಬದ ಹಿರಿಯ ಸದಸ್ಯರಲ್ಲಿ ಒಬ್ಬರು ಆಗಿದ್ದ ಲಿಂ.ಮಲ್ಕಣ್ಣಗೌಡ ಪಾಟೀಲ ಅವರ ಸ್ಮರಣಾರ್ಥ ಈ ಬಾರಿ ಅತ್ಯಂತ ಸರಳ ಕಾರ್ಯಕ್ರಮ ನಡೆಯಲಿದೆ ಎಂದು ಬಿ.ಎಂ.ಪಾಟೀಲ್ ಕಲ್ಲೂರ ತಿಳಿಸಿದ್ದಾರೆ.

Contact Your\'s Advertisement; 9902492681

ಕೊರೋನಾ ವೈರಸ್ ನಿಮಿತ್ತ ಜನರು ಹೆಚ್ಚು ಸೇರಬಾರದು, ಸರ್ಕಾರದ ಆದೇಶವನ್ನು ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರ ಆರೋಗ್ಯವೇ ಭಾಗ್ಯವಾಗಿದೆ.

ಸಾಲಬಾದೆಗೆ ರೈತ ಆತ್ಮಹತ್ಯೆ

ಈಗ ಕುಟುಂಬದ ಸದಸ್ಯರು ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಕ ತಿಳಿಸಲಾಗಿದೆ.
ಲಿಂ. ಮಲ್ಕಣ್ಣಗೌಡ ಪಾಟೀಲ ಅವರು ಸಮಾಜ ಸೇವೆ ಅತ್ಯಂತ ಶ್ಲಾಘನೀಯವಾಗಿದೆ. ಊರಿನಲ್ಲಿ ಯಾವುದೇ ಮನೆಯ ಮತ್ತು ಧಾರ್ಮಿಕ ಕಾರ್ಯಕ್ರಮ ಅವರು ಎದುರು ನಿಂತು ಮಾಡುತ್ತಿದ್ದರು. ಸಮಾಜದ ಕಾರ್ಯಗಳು, ಊರಿನಲ್ಲಿ ದೇವಾಲಯದ ಕಟ್ಟುಗಳು, ಜಾತ್ರೆಗಳು, ಹಬ್ಬ ಹರಿದಿನಗಳು ಸರಳವಾಗಿ ಜನರಿಗೆ ಮುಟ್ಟಿಸುವ ಕೆಲಸ ಸಾಮಾನ್ಯವಾಗಿತ್ತು. ಊರಿನ ಯಾವುದೇ ಕೆಲಸ ಇದ್ದರೂ ಅವರು ಮುಂದೆ ಅಭಿವೃದ್ಧಿ ಕಾರ್ಯಕ್ಕೆ. ಊರಿನಲ್ಲಿ ದೇವಾಲಯದಲ್ಲಿ ಪುರಾಣ, ಪ್ರವಚನ, ಭಜನೆ, ಅತ್ಯಂತ ಯಶಸ್ವಿಯಾಗಿ ನಡೆಸುತ್ತಿದ್ದರು.

ಪ್ರತಿ ವರ್ಷ ಅಮೋಘಸಿದ್ಧೇಶ್ವರ ಜಾತ್ರೆ, ಮೂರು ವರ್ಷಕ್ಕೊಮ್ಮೆ ಮರಗಮ್ಮದೇವಿ ಜಾತ್ರೆ, ಶ್ರಾವಣದಲ್ಲಿ ಭಜನೆಗಳು ಮತ್ತು ಊರಿನಲ್ಲಿ ಮದುವೆ ಮುಂತಾದ ಕಾರ್ಯಗಳು ಅತ್ಯಂತ ಯಶಸ್ವಿಯಾಗಿ ನಡೆಸುತ್ತಿದ್ದರು. ಊರಿನ ಮರಿಯಾದಿ ನಮ್ಮ ಮರಿಯಾದಿ ಎಂದು ಯುವಕರಿಗೆ ಹೇಳುತ್ತಿದ್ದರು.

ಮದುವೆ ಹುಡುಗಿ ತೋರಿಸುವುದಾಗಿ ನಂಬಿಸಿ ವ್ಯಕ್ತಿಯ ಭೀಕರ ಕೊಲೆ: ಐವರು ಅರೇಸ್ಟ್

ಅವರು ನಿರಂತರವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿದರು. ಕಾಯಕ ಜೀವಿ, ಕೃಷಿ ಕಾರ್ಯದಲ್ಲಿ ಸತತವಾಗಿ ನಾಲ್ಕು ಎತ್ತಿನ ಒಕ್ಕಲುತನ ಮತ್ತು ಆಳುಗಳು ವ್ಯವಸಾಯದಲ್ಲಿ ಹೆಚ್ಚು ಆಸಕ್ತಿ. ಸ್ವಂತ ವ್ಯವಸಾಯ ಮಾಡುವ ಜೊತೆಗೆ ಊರಿನ ಸುತ್ತ ಮುತ್ತಲಿನ ಗ್ರಾಮದ ನ್ಯಾಯ ಪಂಚಿತಿಗಳು ಮಾಡುತ್ತೀದ್ದರು. ನಮ್ಮ ಊರಿನ ಸುತ್ತಮುತ್ತ ಗ್ರಾಮ ಕಲ್ಲೂರ ಬಿ, ಯಂಕಂಚಿ, ಕೂಡಲಗಿ, ಮಹೂರ, ಮಂದೇವಾಲ, ಬಳ್ಳುಂಡಗಿ, ನೆಲೋಗಿ ಎಲ್ಲಾ ಗ್ರಾಮದಲ್ಲಿ ಅವರು ಚಿರಪರಿಚಿತರು ಆಗಿದ್ದರು.

ಯಾವುದೇ ಜಾತಿ, ಧರ್ಮ ನೋಡದೆ ಮಾನವರು ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸುವ ಪ್ರಯತ್ನ ಮಾಡುತ್ತಿದ್ದರು. ಇಂದಿಗೂ ಊರಿನಲ್ಲಿ ಅವರ ಹೆಸರು ಎಲ್ಲರೂ ಬಾಯಿಯಲ್ಲಿ ಮತ್ತು ಅವರ ಉಸಿರಿನಲ್ಲಿ ನೆನಪು ಮಾಡಿಕೊಂಡುವ ಹಿರಿಯ ಜನರು ಇದ್ದಾರೆ.

ಗೋಪಾಲಪುರ ಚರ್ಚಿನಲ್ಲಿ ಶ್ರದ್ಧಾ ಭಕ್ತಿಯಿಂದ ಗುಡ್ ಫ್ರೈಡೆ ಆಚರಣೆ

ಅವರ ಕಾಲದಲ್ಲಿ ಸಾರಾಯಿ ಮುಕ್ತ ಗ್ರಾಮ ಕೇಲವು ವರ್ಷ ಕಲ್ಲೂರಕೆ ಗ್ರಾಮವಾಗಿತ್ತು. ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಅವರ ಸೇವೆ ಮತ್ತು ಕಾರ್ಯ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಬಹುದು. ಲಿಂ.ಮಲ್ಕಣ್ಣಗೌಡ ಪೊಲೀಸ್ ಪಾಟೀಲ ಅಉ ಸ್ಮರಣಾರ್ಥವಾಗಿ ಶಾಲಾ ಮಕ್ಕಳಿಗೆ ಎಸ್ ಎಸ್ ಎಲ್ ಸಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ನಗದು ಹಣ ಸುಮಾರು ಹದಿನೈದು ವರ್ಷಗಳಿಂದ ನಿರಂತರವಾಗಿ ಕಲ್ಲೂರ ಕೆ ಸರಕಾರಿ ಪ್ರೌಢ ಶಾಲೆಯಲ್ಲಿ ನೀಡಲಾಗುತ್ತೀದೆ ಎಂದು ಟ್ರಸ್ಟ್ ಅಧ್ಯಕ್ಷ ಬಿ.ಎಂ.ಪಾಟೀಲ ಕಲ್ಲೂರ ತಿಳಿಸಿದರು.

ನಮ್ಮ ಊರಿನ ಹಿರಿಯ ನಮಗೆ ಸಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಅವರು ಮಾರ್ಗದರ್ಶನ ಮಾಡಿದ್ದಾರೆ. ಅವರು ಮಾತುಗಳು ಬಹಳ ನೇರವಾಗಿ ಮತ್ತು ಕಟ್ಟುನಿಟ್ಟಾಗಿ ಹೇಳುತ್ತಿದ್ದರು. ಅವರ ಮಾತುಗಳು ಇಡೀ ಊರಿನ ಜನರು ಕೇಳುತ್ತಿದ್ದರು. ಎಲ್ಲಾ ಕಾರ್ಯಕ್ರಮಗಳು ಮನೆಯವರಂತೆ ಮಾಡುತ್ತಿದ್ದರು. ಮತ್ತೆ ಅವರ ಕೆಲಸ ಕೃಷಿ ಚಟುವಟಿಕೆಗೆ ಹೋಗುತ್ತಿದ್ದರು. ನಮ್ಮ ಊರಿನಲ್ಲಿ ದಿನಾಲು ಲಿಂ ಮಲ್ಕಣ್ಣಗೌಡ ಪಾಟೀಲರ ಹೆಸರು ಊರಿನವರು ನೆನಪು ಮಾಡಿಕೊಳ್ಳುತ್ತಾರೆ.

ಮುಂದಿನ ದಿನಗಳಲ್ಲಿ ಲಿಂ. ಮಲ್ಕಣ್ಣಗೌಡ ಪೊಲೀಸ್ ಪಾಟೀಲ ಪ್ರತಿಷ್ಠಾನ ಮತ್ತು ಕಾಯಕಯೋಗಿ, ಸಾಮಾಜಿಕ ಮುಖಂಡರು,ಲಿಂ.ಮಲ್ಕಣ್ಣಗೌಡ ಪೊಲೀಸ್ ಪಾಟೀಲ ಟ್ರಸ್ಟ್ ವತಿಯಿಂದ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತದೆ ಎಂದು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here