ಉಪಚುನಾವಣೆ: ರವಿ ಗಾಯಕ್ವಾಡ ಹೇಳಿಕೆಗೆ ಕಿಶೋರ್ ಗಾಯಕವಾಡ್ ಆಕ್ರೋಶ

ಬಸವಕಲ್ಯಾಣ: ಹೋರಾಟ ಮಾಡದಿದ್ದರೂ ಪರವಾಗಿಲ್ಲ ಆದರೆ ನೀ ಮಾರಾಟವಾಗಬೇಡ ಎಂಬ ಬಾಬಾಸಾಹೇಬರ ನುಡಿ ಮನದಲ್ಲಿರಿಸಿಕೊಂಡು ನಡೆಯುತ್ತಿದ್ದೇವೆ. ಇಡೀ ದಲಿತ ಜನಾಂಗ ನನ್ನೊಂದಿಗೆ ಇದೆ ಎಂದು ಬಿಜೆಪಿ ಪಕ್ಷ ಸೇರ್ಪಡೆಯಾದ ರವಿ ಗಾಯಕ್ವಾಡ ಅವರ ಹೇಳಿಕೆಯನ್ನು Kpcc ರಾಜ್ಯ ಪ್ರಧಾನ ಕಾರ್ಯದರ್ಶಿ ಅಸಂಘಟಿತ ಕಾರ್ಮಿಕ ವಿಭಾಗದ ಕಿಶೋರ್ ಗಾಯಕವಾಡ್ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು ನನ್ನ ಹೋರಾಟದ ರಥ ದೀನದಲಿತರ ಅಭಿವೃದ್ಧಿಯ ರಥ, ಸರ್ವ ಜನಾಂಗದ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಹಾಗೂ ಧಾರ್ಮಿಕ ರಾಜಕೀಯ ಸಮಾನತೆಯ ರಥ, ಮಹಿಳಾ ಹಕ್ಕಿನ ರಥ, ಸ್ವಾಭಿಮಾನ ಚಳುವಳಿಯ ರಥ ಎಳೆಯುವುದಾದರೆ ಕಾಯಾ-ವಾಚಾ-ಮನಸಾ ಪರಿಶುದ್ಧವಾಗಿ ಮುನ್ನಡೆಸಿ. ಆಗದಿದ್ದರೆ ನಿಮ್ಮ ಪಾಡಿಗೆ ನೀವು ಸುಮ್ಮನಿರಿ, ಹೋರಾಟ ಮಾಡದಿದ್ದರೂ ಪರವಾಗಿಲ್ಲ ಆದರೆ ನೀ ಮಾರಾಟವಾಗಬೇಡ ಎಂಬ ಡಾ. ಬಾಬಾಸಾಹೇಬರ ಹೇಳಿಯನ್ನು ಇಲ್ಲಿ ಸ್ಮರಿಸಿದ್ದಾರೆ.

ನಳಿನಕುಮಾರ್ ಕಟೀಲ್ ಹೇಳಿಕೆಗೆ ಶಾಸಕ ಖರ್ಗೆ ತಿರುಗೇಟು

ಆರೆಸ್ಸೆಸ್ಸಿನ ಒಂದು ಪೊಲಿಟಿಕಲ್ ವಿಂಗಾದ ಬಿಜೆಪಿಗೆ ನಾವು ಬೆಂಬಲ ನೀಡಲ್ಲ ಮತ್ತು ವೋಟ್ ಹಾಕಲ್ಲ. ಸಂವಿಧಾನವನ್ನು ಸರ್ವನಾಶ ಮಾಡಲು ಹೊರಟಿರುವ ದೇಶದ ಸರಕಾರಿ ಆಸ್ತಿ ಖಾಸಗೀಕರಣ ಮಾಡಿ ರಿಸರ್ವೇಶನ್ ಅನ್ನೋ ಅಸ್ತ್ರ ನೇರವಾಗಿ ಕಡೆದು ಹಾಕಿ sc, st ಹಾಗೂ obc ಜನಾಂಗವನ್ನು ಗುಲಾಮಗಿರಿಗೆ, ಜೀತಕ್ಕೆ ತಳ್ಳುತ್ತಿರುವ ದೀನದಲಿತರಿಗೆ ಮಹಿಳೆಯರ ಮೇಲೆ ದೌರ್ಜನ್ಯ ಮಾಡುವ ಲಿಂಗಾಯತ ವಿರೋಧಿ ಬೌದ್ಧ ವಿರೋಧಿ ಪಕ್ಷಕ್ಕೆ ನಾವು ಬೆಂಬಲಿಸಲ್ಲ ಎಂದು ದಲಿತ ಪರವಾಗಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕೆಲವರು ತಮ್ಮ ಸ್ವಾರ್ಥಕ್ಕೆ ಕೆಲಸ ಆಮಿಷಗಳಿಗೆ ಬಲಿಯಾಗಿ ಬಿಜೆಪಿಗೆ ಹೋಗಿರಬಹುದು. ರಾತ್ರಿ ಕಂಡ ಬಾವಿಗೆ ಹಗಲು ಹೋಗಿ ಬಿದ್ದಿದ್ದಾರೆ. ಆಸೆ-ಆಮಿಷಗಳಿಗೆ ಪಾರ್ಟಿ ಬದಲಿಸುವವರು ಹೆಣದ ಮೇಲಿನ ನೊಣ. ನಾವು ಇಂದಿನ ಪ್ರಸ್ತುತ ಸ್ಥಿತಿ ಶರಣರ ಚಿಂತನೆ ಮತ್ತು ಡಾ. ಬಾಬಾಸಾಹೇಬರ ಹೇಳಿಕೊಟ್ಟ ದಾರಿಯಲ್ಲಿ ನಡೆದು ಸಂವಿಧಾನ ವಿರೋಧಿ ದೇಶದ್ರೋಹಿಗಳನ್ನು ಸೋಲಿಸಿ ಸಂವಿಧಾನದ ಮೌಲ್ಯವನ್ನು ಎತ್ತಿ ಹಿಡಿಯುತ್ತೇವೆ ಎಂದು ಸ್ಪಷ್ಟಪಡಿಸಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

‘ಕವಿತೆ ಹಿಂದಿನ ಕಥನ’ ವಿಭಿನ್ನ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಮಹಿಳಾ ಪ್ರತಿನಿಧಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಮಲ್ಲಮ್ಮ ಬಿ ನಾರಾಯಣರಾವ್ ಅವರ ಜೊತೆ ಬಸವಕಲ್ಯಾಣ ತಾಲೂಕಿನ ದಲಿತ ಸಮುದಾಯ ಸಂಪೂರ್ಣ ಬೆಂಬಲವನ್ನು ನೀಡುತ್ತದೆ. ಬಿಜೆಪಿ ಹೋಗಿರೋದು ಒಬ್ಬ ವ್ಯಕ್ತಿ ಮಾತ್ರ. ಬಸವಕಲ್ಯಾಣ ದಲಿತ ಸಮಾಜ ಸಮುದಾಯ ಮುಖಂಡರು ಎಲ್ಲರೂ ಕೂಡ ಕಾಂಗ್ರೆಸ್ ಪಕ್ಷದ ಜೊತೆಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

emedialine

Recent Posts

ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಪಟ್ಟಣದ ವಾರ್ಡ್ ಸಂಖ್ಯೆ12 ರಲ್ಲಿ ಸಿ.ಸಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಪುರಸಭೆ ಮಾಜಿ ಅಧ್ಯಕ್ಷ,…

3 hours ago

ಭ್ರಷ್ಟಾಚಾರ ರಹಿತ ವಿವಿಗೆ ಆದ್ಯತೆ: ರಾಘವೇಂದ್ರ ಭೈರಪ್ಪ

ಕಲಬುರಗಿ: ವಿಶ್ವವಿದ್ಯಾಲಯದಲ್ಲಿ ನಡೆಯುವ ಪ್ರತಿಯೊಂದು ಕಾರ್ಯವು ಕೂಡ ಭ್ರಷ್ಟಾಚಾರ ರಹಿತವಾಗಿರಬೇಕು ಎನ್ನುವ ಮನೋಭಾವ ಹೊಂದಿ ಕೆಲಸ ಮಾಡುತ್ತಿದ್ದೇನೆ ಎಂದು ಗುಲಬರ್ಗಾ…

4 hours ago

ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

ಕಲಬುರಗಿ: ಸ್ವಸ್ತಿಕ ನಗರದ ಅಮರಾವತಿ ಅಪಾಟೆರ್ಂಟ್ ನಿವಾಸಿಗಳಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಜರುಗಿತು. ನಮ್ಮ ದೇಶದ ಪ್ರಧಾನಮಂತ್ರಿ ಅವರ ಸ್ವಚ್ಛ…

4 hours ago

ಸಚಿವ ಸಂಪುಟ ಸಭೆಯಲ್ಲಿ ವಿವಿಧ ಬೇಡಿಕೆ ಈಡೇರಿಕ್ಕೆಗೆ ಆಗ್ರಹ

ಕಲಬುರಗಿ:ಸಚಿವ ಸಂಪುಟ ಸಭೆಯಲ್ಲಿ ಮುಖ್ಯವಾಗಿ ರಾಜ್ಯ ಸರಕಾರದ ವತಿಯಿಂದ ಕಲಬುರಗಿಯಲ್ಲಿ ತೊಗರಿ ಪಾರ್ಕ ಸ್ಥಾಪಿಸಬೇಕು, ಕಲಬುರಗಿ ಅಭಿವೃದ್ದಿ ಮಂಡಳಿಯನ್ನು ಕೆ.ಎಂ.ಎಫ್…

4 hours ago

ಸೇಡಂ: ನೀರಿನಲ್ಲಿ ಮುಳುಗಿ ಮೃತ ಕುಟುಂಬಕ್ಕೆ ಸರ್ಕಾರದಿಂದ 3 ಎಕ್ಕರೆ ಜಮೀನು ನೀಡಿ

ಕಲಬುರಗಿ: ಸೇಡಂ ತಾಲೂಕಿನ ಕುರುಗುಂಟ ಗ್ರಾಮದ  ರಾಜು ನಾಮವಾರ್ ಸಂಗಾವಿ ಹೊಳೆಯಲ್ಲಿ ಮುಳಗಿ ಸಾವನ್ನಪ್ಪಿದ ಮೃತರ ಕುಟುಂಬಕ್ಕೆ 3 ಎಕ್ಕರೆ …

4 hours ago

ಟಿಎಪಿಸಿಎಂ ಅಧ್ಯಕ್ಷರಾಗಿ ಪಾಟೀಲ್ ಅವಿರೋಧ ಆಯ್ಕೆ

ಕಲಬುರಗಿ: ಸಹಕಾರಿ ಕ್ಷೇತ್ರದ ಇಲ್ಲಿನ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ (ಟಿಎಪಿಸಿಎಂ) ಸಂಘದ ಅಧ್ಯಕ್ಷರಾಗಿ ಶರಣಬಸಪ್ಪ ಜಗದೀಶ ಪಾಟೀಲ್…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420