ಕಲಬುರಗಿ: ಬಿಜೆಪಿ ಕಚೇರಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ನಗರ ಹಾಗೂ ಗ್ರಾಮಾಂತರ ಫಲಾನುಭವಿಗಳ ಪ್ರಕೋಷ್ಠದ ನಗರ ಸಂಚಾಲಕ ಮಂಜುನಾಥ ಅಂಕಲಗಿ ಅವರ ಅಧ್ಯಕ್ಷತೆಯಲ್ಲಿ ಪ್ರಕೋಷ್ಠದ ಪ್ರಥಮ ಸಭೆ ಜರುಗಿತು.
ರಾಜ್ಯ ಫಲಾನುಭವಿಗಳ ಪ್ರಕೋಷ್ಠ ಸಹ-ಸಂಚಾಲಕ ಪ್ರಸನ್ನ ನಾಯಕ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾದೇವ ಬೇಳಮಗಿ, ಅಶೋಕ ಬಗಲಿ, ಪ್ರಕೋಷ್ಠದ ಸಹ-ಸಂಚಾಲಕ ಸಿದ್ದು ಪಾಟೀಲ ಸಕ್ಕರ್ಗಾ, ವಿಕಾಸ ಅಣಕಲ, ಮಂಡಲಗಳ ಸಂಚಾಲಕರು ಸಹ-ಸಂಚಾಲಕರು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.