ಬಿಜೆಪಿ ನೇಕಾರ ಪ್ರಕೋಷ್ಠದ ಕಚೇರಿಯಲ್ಲಿ ಪಕ್ಷದ ಸಂಸ್ಥಾಪನ ದಿನಾಚರಣೆ

0
93

ಕಲಬುರಗಿ: ಇಂದು, ಮದ್ಯಾಹ್ನ ಬಿಜೆಪಿ ನೇಕಾರ ಪ್ರಕೋಷ್ಠದ ಕಚೇರಿಯಲ್ಲಿ ನೇಕಾರರು ಸಭೆ ಸೇರಿ ಬಿಜೆಪಿ ಸಂಸ್ಥಾಪನ ದಿನ ಆಚರಿಸಲಾಯಿತು.

ಗ್ರಾಮೀಣ ಜಿಲ್ಲಾ ನೇಕಾರ ಪ್ರಕೋಷ್ಠ ದ ಸಂಚಾಲಕ ಗುರುನಾಥ ಸೊನ್ನದ ರವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಿಜೆಪಿ ಪಕ್ಷದಲ್ಲಿ ಮಾತ್ರ ಎಲ್ಲಾ ಸಮುದಾಯಕ್ಕೆ ನ್ಯಾಯ ಸಿಗುತ್ತದೆ ಎಂದು ತಿಳಿಸಿದರು.

Contact Your\'s Advertisement; 9902492681

ಪಕ್ಶದಲ್ಲಿ 3 ದಶಕ ದಿಂದ ನಿಷ್ಠೆಯಿಂದ ಸೇವೆ ಸಲ್ಲಿಸಿದ ನೇಕಾರ ಸಮುದಾಯ ನಾರಾಯಣ ರವರನ್ನು ರಾಜ್ಯಸಭೆಗೆ ನೇರವಾಗಿ ಆಯ್ಕೆ ಗೊಳಿಸಿದ್ದು, ರಾಜ್ಯದಲ್ಲಿ ಸಹ ಆದ್ಯತೆ ನೀಡಲು ಸಂಘಟಿತರಾಗಿ ಮನವಿ ಮಾಡೋಣ ಎಂದು ಕರೆ ನೀಡಿದರು.

ಕಲಬುರಗಿಯಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ

ಮುಂಬರುವ ಮಹಾನಗರ ಪಾಲಿಕೆಯಲ್ಲಿ ಕನಿಷ್ಠ 3 ನೇಕಾರ ಅಭ್ಯರ್ಥಿಗಳನ್ನು ಕಣದಲ್ಲಿ ನಿಲ್ಲಿಸಿ, ಪಕ್ಷದ ಮಾನ ಮುಚ್ಚುವ ಕೆಲಸ ಮಾಡಲು ಸಿದ್ದರಾಗಿ ಎಂದು ಸಭೆಯಲ್ಲಿ ರೇವಣಸಿದ್ದಪ್ಪ ಗಡ್ಡದ ಅವರು ಕರೆ ನೀಡಿದರು.

ನೂತನವಾಗಿ ಆಯ್ಕೆಯಾದ ಕಲಬುರಗಿ ಮಹಾನಗರದ ಬಿಜೆಪಿಯ ನೇಕಾರ ಪ್ರಕೋಷ್ಠದ ನಗರ ಜಿಲ್ಲಾ ಸಂಚಾಲಕ ಶಿವಲಿಂಗಪ್ಪಾ ಅಷ್ಟಗಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಹ-ಸಂಚಾಲಕ ಜೇನವೆರಿ ವಿನೋದ ಕುಮಾರ ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಜಮಖಂಡಿ ವಂದಿಸಿದರು. ಸಮುದಾಯದ ಹಿರಿಯರು, ಯುವಕರು ಹಾಗೂ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here