ಮಾದಿಗ ಸಮಾಜಕ್ಕೆ ಕಾಟಮಳ್ಳಿ ಅಧ್ಯಕ್ಷ

0
51

ವಾಡಿ: ಪಟ್ಟಣದ ಮಾದಿಗ ಸಮಾಜದ ನೂತನ ಅಧ್ಯಕ್ಷರಾಗಿ ಹಿರಿಯ ಮುಖಂಡ ಬಸವರಾಜ ಕಾಟಮಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ.

ಅನಾರೋಗ್ಯದ ಕಾರಣ ಸಿದ್ರಾಮ ತೆಗನೂರ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ಸೋಮವಾರ ನಗರದ ಎನ್‌ಆರ್‌ಎಂಯು ಕಚೇರಿ ಸಭಾಂಗಣದಲ್ಲಿ ಸಮಾಜದ ಮುಖಂಡರಾದ ರಾಜು ಮುಕ್ಕಣ್ಣ, ಪರಶುರಾಮ ಕಟ್ಟಿಮನಿ, ಹಾಜಪ್ಪ ಲಾಡ್ಲಾಪುರ, ರಾಜೇಶ ಕಾಂಬಳೆ, ಯಂಕಪ್ಪ ಗೋಪಿರೆಡ್ಡಿ, ಬಸಲಿಂಗಪ್ಪ ಕೂಡಲೂರ, ಮಲ್ಲಿಕಾರ್ಜುನ ಸೈದಾಪುರ, ಮಲ್ಲಿಕಾರ್ಜುನ ಟಿ.ಸಿ, ರಾಮಚಂದ್ರ, ದೇವಿಂದ್ರ ಕರದಳ್ಳಿ, ಚಂದಪ್ಪ ಕಟ್ಟಿಮನಿ, ನರಸಿಂಹಲು, ಅಂಬರೇಶ ಮಾಳಗಿ, ಬಾಲರಾಜ ಬಳಿಚಕ್ರ, ಹಾಜಪ್ಪ ಅರಶಿಣಗಿ, ಶ್ರೀಕಾಂತ ಬಿರಾಳ, ಹಣಮಂತ, ಬಸವರಾಜ, ಅರ್ಜುನ, ರಾಮು, ಕಾಂತು, ಶಾಂತು ಸೇರಿದಂತೆ ಅನೇಕರು ಪಾಲ್ಗೊಂಡ ಸಭೆಯಲ್ಲಿ ಈ ಕುರಿತು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here