ಅಂಬೇಡ್ಕರ್ ಯುವ ಬ್ರಿಗೇಡ್ ವತಿಯಿಂದ ಶ್ರೀ ರಾಮನವಮಿ ಆಚರಣೆ

0
36

ಕೋಲಾರ: ಜಿಲ್ಲೆ ಮತ್ತು ತಾಲೂಕಿನ ನರಸಾಪುರ ಗ್ರಾಮದಲ್ಲಿ ಡಾ.ಬಿ. ಆರ್. ಅಂಬೇಡ್ಕರ್ ನಗರದ ವೃತ್ತದಲ್ಲಿ ಸರಳವಾಗಿ ಶ್ರೀರಾಮನವಮಿ ಆಚರಣೆ ಮಾಡಲಾಯಿತು. ಮಹಾಮಾರಿ ಕೊರೊನಾ ಎರಡನೇ ಅಲೆ ಮೊದಲ ಅಲೆಗಿಂತಲೂ ಭೀತಿ ಹುಟ್ಟಿಸಿದ್ದು, ಜನರನ್ನು ಆತಂಕಕ್ಕೆ ದೂಡಿದೆ. ಇದರ ನಡುವೆಯು ಜನರು ಶ್ರೀ ರಾಮನವಮಿ ಹಬ್ಬವನ್ನು ಮನೆಗಳಲ್ಲಿಯೇ ದೇವರಿಗೆ ಪೂಜೆ ಸಲ್ಲಿಸಿ ಸರಳವಾಗಿ ಆಚರಿಸಿದರು.

ಅಖಿಲ ಭಾರತ ಡಾ.ಬಿ.ಆರ್ ಅಂಬೇಡ್ಕರ್ ಯುವ ಬ್ರಿಗೇಡ್ ನರಸಾಪುರ ವತಿಯಿಂದ ಸರಳವಾಗಿ ಶ್ರೀರಾಮನವಮಿ ಆಚರಿಸಿ ಜನರಿಗೆ ಪಾನಕ, ಕೋಸಂಬರಿ, ಮಜ್ಜಿಗೆಯನ್ನು ನೀಡಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತ ಡಾ ಬಿ ಆರ್ ಅಂಬೇಡ್ಕರ್ ಯುವ ಬ್ರಿಗೇಡ್ ಯುವ ಮುಖಂಡರಾದ ಹರೀಶ್ ರವರು
ಶ್ರೀ ರಾಮ ನವಮಿ ಬಂತೆಂದರೆ ಎಲ್ಲೆಲ್ಲೂ ಜನರಿಗೆ ನೀರು ಮಜ್ಜಿಗೆ ಪಾನಕ, ಹೆಸರು ಬೇಳೆ ಹಂಚಿ ಸಂಭ್ರಮದಿಂಧ ಆಚರಿಸಲಾಗುತ್ತಿತ್ತು, ಆದರೆ ಈ ಬಾರಿ ಆದ್ಯಾವುದೇ ಇಲ್ಲದೆ ಕೇವಲ ದೇವಾಲಯಗಳಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಶ್ರೀ ರಾಮ ನವಮಿ ಹಬ್ಬವನ್ನು ಸರಳವಾಗಿ ಆಚರಿಸಿದ್ದು ಕಂಡು ಬಂದಿದೆ ಎಂದರು.

ಈ ಸಂದರ್ಭದಲ್ಲಿ ಚಿನ್ನಯ್ಯ, ಹರೀಶ್, ಸಿದ್ದಾರ್ಥ್(ಲಟ್ಟು), ಗೋಪಿ, ಮಾರುತಿ, ಪ್ರಕಾಶ್(ಗುಬ್ಬಿ), ಕಿರಣ್, ಜೈಭೀಮ್ ಪ್ರಕಾಶ್, ವಿನಾಯಕ, ಪ್ರಸನ್ನ, ಮಂಜುನಾಥ್, ನವೀನ್, ಮುನೇಂದ್ರ, ಕೆ ಆರ್ ಪುರಂ ಶಶಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here