ಶಹಾಪುರ ಪೊಲೀಸರಿಂದ ಭರ್ಜರಿ ಬೇಟೆ ಅಂತರರಾಜ್ಯ ಕಳ್ಳರ ಬಂಧನ

0
93

ಶಹಾಪುರ: ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದ ಅಂತರರಾಜ್ಯ ಕಳ್ಳರ ಗುಂಪೊಂದನ್ನು ಇಂದು ಬೆಳಗ್ಗೆ 4 ಗಂಟೆಯ ಸುಮಾರಿಗೆ ಶಹಾಪುರ ನಗರದ ಬಿ.ಗುಡಿ ರಸ್ತೆಯ ಕೆಇಬಿ ಹತ್ತಿರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಾದ 4 ಜನ ಕಳ್ಳರಲ್ಲಿ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯವರಾಗಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ ಬಂಧಿತ ನಾಲ್ಕು ಜನರಲ್ಲಿ ಒಬ್ಬ ಕಳ್ಳ ಓಡಿ ಹೋಗಿದ್ದಾನೆ.

Contact Your\'s Advertisement; 9902492681

ಅಂತಾರಾಜ್ಯ ಕಳ್ಳರಿಂದ ಸುಮಾರು 2.60.000 ಸಾವಿರ ರೂಪಾಯಿ ನಗದು ಹಾಗೂ ೪ ಲಕ್ಷ ರೂಪಾಯಿಗಳ ಅಂದಾಜು ಮೌಲ್ಯದ ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗಳಾದ ಹೃಷಿಕೇಶ್ ಭಗವಾನ್, ಹಾಗೂ ಸುರಪುರದ ಉಪ ವಿಭಾಗದ ಉಪಾಧೀಕ್ಷಕರಾದ ಶಿವನಗೌಡ ಪಾಟೀಲ್, ಅವರ ಮಾರ್ಗದರ್ಶನದಲ್ಲಿ ಶಹಾಪುರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ನಾಗರಾಜ ಜೆ.ಅವರ ನೇತೃತ್ವದಲ್ಲಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಸಿಬ್ಬಂದಿಗಳಾದ ಹೊನ್ನಪ್ಪ ,ಸತೀಶ್ ಕುಮಾರ್, ಬಸವರಾಜ್, ಗಣಪತಿ, ಗಜೇಂದ್ರ , ಬಾಬು, ತಂಡದಲ್ಲಿದ್ದರು.

ಈ ಪ್ರಕರಣ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here