ಸಮಾಜ ಸೇವಕ ರಾಘವೇಂದ್ರ ಎಲಿಗಾರ್ ಕೊರೊನಾ ವಾರಿಯರ್ಸ್‌ಗೆ ಅನ್ನ ನೀರು ವಿತರಣೆ

1
25

ಸುರಪುರ: ನಗರದ ತಿಮ್ಮಾಪುರ ನಿವಾಸಿ ಸಮಾಜ ಸೇವಕ ರಾಘವೆಂದ್ರ ಎಲಿಗಾರ್ ತನ್ನ ಸಹೋದರಿ ವಿಜಯಲಕ್ಷ್ಮೀ ನಿಂಗರಾಜ ಕುನ್ನೂರ ಅವರ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಕೊರೊನಾ ವಾರಿಯರ್ಸ್ ಮತ್ತು ಸಾರ್ವಜನಿಕರಿಗೆ ಅನ್ನ ನೀರು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಘವೇಂದ್ರ ಎಲಿಗಾರ್,ಈಗ ರಾಜ್ಯದಲ್ಲಿ ಲಾಕ್‌ಡೌನ್ ಆರಂಭಗೊಂಡಿದ್ದು ಬಡ ಜನರು ತೀವ್ರ ತೊಂದರೆಯಲ್ಲಿದ್ದಾರೆ ಹಾಗು ಕೊರೊನಾ ವಾರಿಯರ್ಸ್ ನಮಗಾಗಿ ಹಗಲಿರಳು ಸೇವೆ ಮಾಡುತ್ತಿದ್ದಾರೆ.ಆದ್ದರಿಂದ ನನ್ನ ಸಹೋದರಿಯ ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸರಳವಾಗಿ ಆಚರಿಸುವ ಉದ್ದೇಶದಿಂದ ನಗರದಲ್ಲಿನ ಎಲ್ಲಾ ಕೊರೊನಾ ವಾರಿಯರ್ಸ್ ಮತ್ತು ಅನಾಥರಿಗೆ ನೆರವಾಗುವ ಮೂಲಕ ಆಚರಣೆ ಮಾಡಲಾಗುತ್ತಿದೆ ಎಂದರು.

Contact Your\'s Advertisement; 9902492681

ನಗರದಲ್ಲಿನ ಪೊಲೀಸ್ ಇಲಾಖೆ ಆರೋಗ್ಯ ಇಲಾಖೆ ಕಂದಾಯ ಇಲಾಖೆ ನಗರಸಭೆ ಹೀಗೆ ಎಲ್ಲಾ ಇಲಾಖೆಯಲ್ಲಿ ಕರ್ತವ್ಯದಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅನ್ನ ನೀರು ವಿತರಣೆ ಮಾಡಲಾಗಿದೆ.ಅಲ್ಲದೆ ನಗರದ ವಿವಿಧೆಡೆಗಳಲ್ಲಿರುವ ಅನಾಥರು ಮಾನಸಿಕ ಅಸ್ವಸ್ಥರು ಮತ್ತು ನಿರ್ಗತಿಕ ವಯೋವೃಧ್ಧರಿಗೆ ಅನ್ನ ನೀರು ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ನಿಂಗರಾಜ ಕುನ್ನೂರು ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here