ಸುರಪುರ: ಕಳೆದ ಅನೇಕ ವರ್ಷಗಳಿಂದ ನಗರದ ಬಸ್ ನಿಲ್ದಾಣದಲ್ಲಿ ಕಾಲಕಳೆಯುತ್ತಿರುವ ಬುದ್ಧಿ ಮಾಂದ್ಯ ಯುವಕ ಪ್ರಕಾಶ ಶ್ವಾನಕ್ಕೆ ಅನ್ನ ನೀಡಿ ಮಾನವೀಯತೆ ಮೆರೆದ ದೃಶ್ಯ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.ಬುದ್ಧಿ ಮಾಂದ್ಯ ಯುವಕ ಪ್ರಕಾಶ ಶ್ವಾನವನ್ನು ತನ್ನ ಆಪ್ತ ಗೆಳೆಯನಂತೆ ಸದಾಕಾಲ ಜೊತೆಯಲ್ಲಿಯೆ ಇರಿಸಿಕೊಳ್ಳುತ್ತಿದ್ದು,ಗುರುವಾರ ಮದ್ಹ್ಯಾನ ಯಾರೋ ತನಗೆ ನೀಡಿದ ಅನ್ನವನ್ನು ಶ್ವಾನಕ್ಕೂ ಹಾಕಿ ಅದರೊಂದಿಗೆ ತಾನೂ ಅದೇ ಅನ್ನವನ್ನು ಸೇವಿಸುವ ಮೂಲಕ ಮಾನವೀಯತೆ ಮರೆದಿದ್ದಾನೆ.
ಲಾಕ್ಡೌನ್ ಕಾರಣದಿಂದ ಎಲ್ಲಿಯೂ ಅನ್ನ ಸಿಗದ ಪರಸ್ಥಿತಿ ಹಾಗು ಜನತೆಗೆ ಲಾಕ್ಡೌನ್ ಬೀರಿದ ಗಂಭೀರತೆಗೆ ಹಿಡಿದ ಕನ್ನಡಿಯಂತೆ ಈ ದೃಶ್ಯ ಈಗ ಫುಲ್ ವೈರಲ್ ಆಗಿದೆ.ಹವ್ಯಾಸಿ ಪತ್ರಕರ್ತ ಮಂಜುನಾಥ ಬಿರಾದಾರ್ ಎಂಬುವವರು ದೃಶ್ಯವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.