ಆರೋಗ್ಯ ಇಲಾಖೆಯ ಸಿಬ್ಬಂದಿಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಚಿವರಿಗೆ ಮನವಿ

0
55

ಕಲಬುರಗಿ: ಕರ್ನಾಟಕ ರಾಜ್ಯಆರೋಗ್ಯ ಸಹಾಯಕರು ಮತ್ತು ಮೇಲ್ವಿಚಾರಕರ ಸಂಘದ ಜಿಲ್ಲಾ ಘಟಕದಿಂದ ಕಲಬುರಗಿ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ವಿವಿಧ ಬೇಡಿಕೆಗಳಿಗಾಗಿ ನಿನ್ನೆ ಮನವಿ ಪತ್ರ ಸಲ್ಲಿಸಲಾಯಿತು.

ಕೋವಿಡ-೧೯ ಎರಡನೆಅಲೇಯುತಿವ್ರಗತವಾಗಿ ಹರಡುತ್ತಿರುವ ಪ್ರಯುಕ್ತಕಿರಿಯಆರೋಗ್ಯ ಸಹಾಯಕರು ಮಹಿಳಾ & ಪುರುಷ, ಹಾಗೂ ಹಿರಿಯಆರೋಗ್ಯ ಸಹಾಯಕರು ಮಹಿಳಾ & ಪುರುಷ ಹಗಲಿರುಳು ಎನ್ನದೆಯಾವುದೆರಜೆ ಪಡೆಯದೆರ ವಿವಾರವುಕೂಡ ಕೋವಿಡ-೧೯ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಾರದಲ್ಲಿಒಂದು ದಿನವು ರಜೆ ಇಲ್ಲದಂತಾಗಿದೆ.ಹಾಗೂ ಹಲವಾರು ಬೇಡಿಕೆಗಳಿಗೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲಾಯಿತು.

Contact Your\'s Advertisement; 9902492681

ಕೋವಿಡ ಕೆಲಸದಒತ್ತಡದಲ್ಲಿಕುಟುಂಬದವರನ್ನು ನೊಡಿಕೊಳ್ಳುವದು ಕಷ್ಟಕರವಾಗುತ್ತದೆ. ಕೆಲಸದಒತ್ತಡದಲ್ಲಿ ಹಲವಾರು ಸಮಸ್ಯೆಗಳು ಉಂಟಾಗಿ ಕಷ್ಟ ಅನುಭವಿಸುತ್ತಿದ್ದಾರೆ, ಕುಟುಂಬದ ಸದಸ್ಯರಿಗೆಕೋವಿಡ ಪಾಸಿಟಿವ ಬಂದಾಗಅವರನ್ನು ರಕ್ಷಿಸಿಕೊಳ್ಳಲು ನಮಗೆ ಸಮಯವಿಲ್ಲದಂತಾಗಿದೆ, ಅಲ್ಲದೆಅವರಿಗೆಯಾವುದೆ ಆಸ್ಪತ್ರೆಗಳಲ್ಲಿ ಸೆರ್ಪಡೆಮಾಡಲು ಹಾಸಿಗೆಗಳು (ಃಇಆ)ಸಿಗುತ್ತಿಲ್ಲ್ಲ. ಅದಕ್ಕಾಗಿ ನೌಕರರಿಗೆ ಮತ್ತುಅವರಕುಟುಂಬ ಅವಲಂಬಿತರಿಗೆ ಪ್ರತ್ಯೆಕವಾದ ವಾರ್ಡ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಲಾಯಿತು.

ಕೋವಿಡ ಪ್ರಾರಂಭವಾದಾಗಿನಿಂದಇಲ್ಲಿಯವರೆಗೆ ಮನೆ-ಮನೆಗೆ ಭೇಟಿ ನಿಡಿ ಕರೊನಾ ಸಮಿಕ್ಷೆ, ಕೋವಿಡ ಸ್ಯಾಂಪಲ ಪರಿಕ್ಷೆಗೆಜನರನ್ನು ಮನಓಲಿಸುವದು,ಹಾಗೂ ರಾಜ್ಯದಗಡಿಯಲ್ಲಿ  ಬರುವಚೆಕಪೊಸ್ಟದಲ್ಲಿ ಹಗಲು ತಾತ್ರಿಯನ್ನದೆಕಾರ್ಯನಿರ್ವಹಿಸುತ್ತಿದ್ದಾರೆ, ಕೋವಿಡ ಪಾಸಿಟಿವ ಬಂದರೋಗಿಯ ಪ್ರೈಮರಿ ಮತ್ತು ಸೆಕೆಂಡ್ರಿ ಲಿಸ್ಟ ಮಾಡುವದು, ಮತ್ತು ಪರಿಹಾರ ಪೊರ್ಟಲನಲ್ಲಿ ನೊಂದಣಿ ಮಾಡುವದು, ಉಪಕೇಂದ್ರ ಮಟ್ಟದಲ್ಲಿಕೋವಿಡ ಲಸಿಕೆ ನೀಡುವದು ಮತ್ತು ಕೊವಿನ ಪೊರ್ಟಲ್‌ನಲ್ಲಿ ನೊಂದಣಿ ಮಾಡಬೇಕು. ಹೀಗೆ ಹಲವಾರು ಕೆಲಸ ನಿರ್ವಹಿಸುತ್ತಿದ್ದರು ಸರಕಾರದಿಂದಕೋವಿಡ ಭತ್ಯ ಸಿಗುತ್ತಿಲ್ಲ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಬಹಳ ದಿನಗಳ ಬೇಡಿಕೆಯಾದಆರೋಗ್ಯ ಸಹಾಯಕರ ಪದನಾಮ ಬದಲಾವಣೆಆಗದೆ ಊಳಿದಿರುವದು ತುಂಬ ಬೆಸರಉಂಟುಮಾಡಿದೆ, ದಯಮಾಡಿ ಪದನಾಮ ಬದಲಾವಣೆ ಮಾಡುವದು. ನೌಕರರಿಗೆಪ್ರತಿ ತಿಂಗಳು ೧ನೇ ತಾರಿಖಿನೊಳಗೆ ಸಂಬಳ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈ ವೇಳೆಯಲ್ಲಿ ಸಂಘದ ಜಿಲ್ಲಾ ಅದ್ಯಕ್ಷರಾದ ಪದ್ಮಿನಿ ಕಿರಣಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ವಿಠ್ಠಲ ಬಡಿಗೇರ,  ಉಪಾಧ್ಯಾಕ್ಷರಾದ ಅನುಸುಯಾ ಗೊಳಾ, ಸಹ ಕಾರ್ಯದರ್ಶಿ ಶಿವಶರಣಪ್ಪ ಸಾಲಹಳ್ಲಿ ಹಾಗೂ ಸದಸ್ಯರುಗಳಾದ ಸೈಯದಅಹಮದ ಅಲಿ, ರಫಿಕಅಹಮದ ಅಲಿ, ರಮಾಕಾಂತ ಅಳ್ಳೊಳ್ಳಿ ಶಕುಂತಲಾ, ಸೈಯದ ಮುಸ್ತಪಾ, ಶಾರದಬಾಯಿ ನಾಲ್ವಾರ, ಸೈಯದರವಸತ ಅಲಿ, ಕಮಲಾ ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here