ಕಲಬುರಗಿ: ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಹಾಗೂ ಜಿಲ್ಲೆಯ ಹಿರಿಯ ದಲಿತ ನಾಯಕ ಗುರುಶಾಂತ ಪಟ್ಟೇದಾರ ನಿಧನಕ್ಕೆ ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಅಂಬಾರಾಯ ಅಷ್ಠಗಿ ಸಂತಾಪ ಸೂಚಿಸಿದ್ದಾರೆ.
ಬುದ್ಧ, ಬಸವ ಮತ್ತು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕಟ್ಟಾ ಅನುಯಾಯಿಗಿದ್ದ ಪಟ್ಟೇದಾರ ಅವರು ನನ್ನಗೆ ಮಾರ್ಗದರ್ಶಕ ಹಾಗೂ ಹಿರಿಯ ಸಹೋದರನಂತಿದರು ಎಂದು ತಿಳಿಸಿ ದುಃಖವ್ಯಕ್ತಪಡಿಸಿದ್ದಾರೆ.
ಭಗವಾನ್ ಬುದ್ಧರು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಮತ್ತು ಅಪಾರ ಅಭಿಮಾನಿ ಬಳಗಕ್ಕೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕಂಬನಿ ಮಿಡಿದಿದ್ದಾರೆ.