ಕಲಬುರಗಿ: ನಯಾ ಸವೇರಾ ಸಂಘಟನೆಯ ಅಧ್ಯಕ್ಷ ಮೋದಿನ್ ಪಟೇಲ್ ಅಣಬಿ ಅವರ ನೇತೃತ್ವದಲ್ಲಿ ಸಂಘಟನೆಯ ಉತ್ತರ ವಲಯದ ಅಧ್ಯಕ್ಷ ಹೈದರಲಿ ಇನಾಮ್ದಾರ್ ಅವರ ಜನ್ಮದಿನದ ನಿಮಿತ್ತ ನಗರದ ಶ್ರೀ ಶರಣಬಸವೇಶ್ವ ದೇವಸ್ಥಾನದ ಎದುರುಗಡೆ ಇರುವ ಬಡವರು ಹಾಗೂ ನಿರ್ಗತಿಕರಿಗೆ ಆಹಾರದ ಪ್ಯಾಕೆಟ್, ಬ್ರೆಡ್, ಬಿಸ್ಕೆಟ್, ನೀರಿನ ಬಾಟಲ್ಗಳನ್ನು ಹಂಚುವುದರ ಮೂಲಕ ಸರಳವಾಗಿ ಆಚರಿಸಲಾಯಿತು.
ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕಿ ಮಹೇಶ್ವರಿ ವಾಲಿ, ಶೇಕ್ ಯುನುಸ್ ಅಲ್ಲಿ, ಸೈರಾ ಬಾನು, ಅಬ್ದುಲ್ ವಾಹಿದ್, ಮಕ್ಬುಲ್ ಅಹ್ಮದ್ ಸಗರಿ, ಶೇಕ್ ಮೋಹಿನ್, ಮೊಹಮ್ಮದ್ ಖಾಲಿಕ, ಗೀತಾ ಮುದುಗಲ್, ಅಬ್ದುಲ್ ರಜಾಕ್ ಚೌದರಿ, ಬಾಬಾ ಫಕ್ರುದ್ದಿನ್ ಅನ್ಸಾರಿ, ಮೊಹಮ್ಮದ್ ಮೂಸಾ ಅಜಮ್, ಯುನುಸ್ ಪಟೇಲ್, ವಿಜಯ್ ಕುಮಾರ್, ತಹಿನಿಯತ್ ಫಾತಿಮಾ, ಮಲ್ಲಿಕಾರ್ಜುನ್ ನೀಲೂರ್, ಸವಿತಾ, ಪವನ್ ಇದ್ದರು.