ಮಣ್ಣಿನ ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ಆರುಜನ ಸಾವು

0
122

ಬಸವಕಲ್ಯಾಣ: ಬೀದರ್ ಜಿಲ್ಲೆಯ ಬಸವಕಲ್ಯಾಣದ ವಾಡ೯ ನಂ 6 ರ ಛಿಲ್ಲಾ ಗಲ್ಲಿಯಲ್ಲಿ  ಒಂದು ಹಳೆಯ ಮಣ್ಣಿನ ಮನೆಯ ಮೇಲ್ಛಾವಣಿ ಕುಸಿದ ಪರಿಣಾಮ ಮುಸ್ಲಿಂ ಸಮುದಾಯದ ಒಂದೇ ಕುಟುಂಬದ 6 ಜನ ಮೃತ ಪಟ್ಟಿರುವ ಘಟನೆ ಸಂಭವಿಸಿದೆ.

Contact Your\'s Advertisement; 9902492681

ಮನೆಯ ಮುಖ್ಯಸ್ಥ ಶೇಖ ನದಿಮ ಶೇಖ ಯುಸೂಫ (42) ಫರಿದಾಬಾನು ಗಂಡ ಶೇಖ ನದಿಮ (36), ಇವರ ನಾಲ್ಕು ಮಕ್ಕಳಾದ ಶಾಬಾನು 15),ಮೇಹತಾಬ ಬೀ (13), ಫೈಜಾನ ಅಲಿ (5), ಫರಹಾನ ಅಲಿ (3) ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳು.

ಬಸವಕಲ್ಯಾಣ ನಗರ ಸಿ.ಪಿ.ಐ ರವರು ಹಾಗೂ ನಗರ ಠಾಣೆ ಸಿಬ್ಬಂದಿಯವರು ಹಾಗೂ ಸಾವ೯ಜನಿಕರೂ ಕೂಡಿಕೊಂಡು ಮಣ್ಣಿನ ಅಡಿಯಲ್ಲಿ ಸಿಲುಕಿರುವ ಮೃತ ದೇಹಗಳನ್ನು ಹೊರಗಡೆ ತೆಗೆದು ಮುಂದಿನ ಕ್ರಮ ಜರುಗಿಸಿರುತ್ತಾರೆ.

ಘಟನೆ ಸ್ಥಳಕ್ಕೆ ಬಸವಕಲ್ಯಾಣ ಶಾಸಕರಾದ ಬಿ.ನಾರಾಯಣರಾವ್ ಹಾಗೂ ತಹಶೀಲ್ದಾರ ಸಾವಿತ್ರಿ ಸಲಗರ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿ ಸರಕಾರದ ಸೌಲಭ್ಯ ಹಾಗೂ ಸಹಕಾರದ ಭರವಸೆ ನೀಡಿದರು.

ಈ ಕುರಿತು ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here