ಹಿರಿಯ ಪತ್ರಕರ್ತ ಜಯತೀರ್ಥ ಕಾಗಲಕರ್ ಗೌರವ ನಮನ

0
30

ಕಲಬುರಗಿ: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ ಕಲಬುರಗಿ ಆವೃತ್ತಿ ಯ ಸ್ಥಾನಿಕ ಸಂಪಾದಕ ಜಯತೀರ್ಥ ಕಾಗಲಕರ್ (53) ಕೊರೊನೊ ಸೊಂಕಿಗೆ ಬಲಿಯಾಗಿದ್ದು ಇಡೀ ಕಲಬುರಗಿ ಜಿಲ್ಲೆಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಲಯ ಅಧ್ಯಕ್ಷರಾದ ಸುನೀಲ ಮಾರುತಿ ಮಾನಪಡೆ ಹೇಳಿದ್ದಾರೆ.

ಅವರು ಅಗಲಿದ ಪತ್ರಕರ್ತರ ಭಾವಚಿತ್ರಕ್ಕೆ ನಮನಸಲ್ಲಿಸಿ ಮಾತನಾಡಿದ ಅವರು ವಾರದ ಹಿಂದೆ ಕೊರೊನೊ ಸೊಂಕಿಗೆ ಒಳಗಾಗಿದ್ದ ಅವರನ್ನು ಚಿಕಿತ್ಸೆ ಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಗೆ ಸ್ಪಂದಿಸದೇ ಕೊನೆಯುಸಿರೆಳೆದರು. ಕಳೆದ ಮೂರು ದಶಕದಿಂದ ಸಂಯುಕ್ತ ಕರ್ನಾಟಕದ ವರದಿಗಾರರಾಗಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಾ  ಇತ್ತೀಚಿಗೆ ಸ್ಥಾನಿಕ ಸಂಪಾದಕರಾಗಿ ಬಡ್ತಿ ಹೊಂದಿದ್ದರು ಎಂದು ತಿಳಿಸಿದರು.

Contact Your\'s Advertisement; 9902492681

ಮೂರು ದಶಕಗಳಿಂದ ದಿವಂಗತ ಮಾರುತಿ ಮನಪಡೆಯರ ಜೊತೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ, ಅಭಿವೃದ್ಧಿಗಾಗಿ ಹಲವು ಜನಪರ ವರದಿಗಳ ಮೂಲಕ ಸರ್ಕಾರದ ಗಮನ ಸೆಳೆದಿದ್ದರು. ಕಾಗಲಕರ್ ಅವರ ಅಗಳಿಕೆಯಿಂದ ಕಲಬುರಗಿ ಜಿಲ್ಲೆಯು ಒಬ್ಬ ಸರಳ ಪ್ರಾಮಾಣಿಕ ವ್ಯಕ್ತಿ ,ಮಾರ್ಗದರ್ಶಕರನ್ನು ಕಳೆಕೊಂಡು ಬಡವಾಗಿದೆ ಎಂದು ಸಂತಾಪ ಸೂಚಿಸಿದರು.

ಈ ವೇಳೆಯಲ್ಲಿ ಶಾಂತಪ್ಪ ಪಾಟೀಲ, ಶಾಂತ ಘಂಟೆ, ಮಲ್ಲಣಗೌಡ ಪಾಟೀಲ ಎಸ್, ಎಫ್, ಐ ಜಿಲ್ಲಾ ಮುಖಂಡರಾದ ಸಿದ್ದಲಿಂಗ ಪಾಳ , ಮೈಲಾರಿ ದೊಡ್ಡಮನಿ , ಸಂಸ್ಕಾರ ಪ್ರತಿಷ್ಠಾನದ ಅಧ್ಯಕ್ಷರಾದ ವಿಠಲ ಚಿಕಣಿ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here