ಮನೆಗಳಲ್ಲಿಯೆ ಪ್ರಾರ್ಥನೆ ಸಲ್ಲಿಸಿ ರಂಜಾನ್ ಆಚರಿಸಿದ ತಾಲೂಕಿನ ಜನತೆ

0
19

ಸುರಪುರ: ರಾಜ್ಯಾದ್ಯಂತ ಕೊರೊನಾ ಸೊಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಜನತೆ ಈಬಾರಿಯ ರಂಜಾನ್ ಹಬ್ಬವನ್ನು ತಮ್ಮ ಮನೆಗಳಲ್ಲಿಯೆ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಿದರು.

ಸುರಪುರ ನಗರದ ಅನೇಕ ಜನ ಮುಖಂಡರು ತಮ್ಮ ಮನೆಗಳಲ್ಲಿಯೆ ಸರಳವಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬವನ್ನು ಆಚರಿಸಿದರು.ಈ ಕುರಿತು ಮುಖಂಡರಾದ ಅಹ್ಮದ್ ಪಠಾಣ್ ಹಾಗು ಪತ್ರಕರ್ತ ಕಲೀಂ ಫರೀದಿಯವರು ಮಾತನಾಡಿ,ರಾಜ್ಯಾದ್ಯಂತ ಕೊರೊನಾ ಹರಡುತ್ತಿರುವುದರಿಂದ ಸರಕಾರ ಕೆಲ ನಿಯಮಗಳನ್ನು ಜಾರಿಗೊಳಿಸಿದೆ.ಅದರಂತೆ ನಾವೆಲ್ಲ ಮುಸ್ಲಿಂ ಬಾಂಧವರು ಕೂಡ ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ನಮ್ಮ ದೊಡ್ಡ ಹಬ್ಬವಾದ ರಂಜಾನ್ ಹಬ್ಬವನ್ನು ಅತ್ಯಂತ ಸರಳವಾಗಿ ಮನೆಯಲ್ಲಿ ಅಲ್ಲಾನಿಗೆ ಪ್ರಾರ್ಥನೆ ಸಲ್ಲಿಸಿ ಕೊರೊನಾ ಈ ಲೋಕದಿಂದ ದೂರವಾಗಲಿ ಎಂದು ಬೇಡಿಕೊಂಡಿರುವುದಾಗಿ ತಿಳಿಸಿದರು.

Contact Your\'s Advertisement; 9902492681

ಅದರಂತೆ ಮುಖಂಡರಾದ ಹಾಲಿಮ್ ಇಮಾಮಸಾಬ್ ಪಾನವಾಲ ಅಬೀದ್ ಹುಸೇನ್ ಪಗಡಿ ಅನ್ವರ ಜಮಾದಾರ ದಾವೂದ್ ಪಠಾಣ್ ಜಿಲಾನಿ ಸಾಬ್ ಗೌಸಮಿಯಾ ಜಮಾದಾರ್ ಮಹಿಬೂಬ ಸಾಬ್ ಜಮಾದಾರ್ ಸಯ್ಯದ್ ಸಿಕಂದರ್ ಸಯ್ಯದ್ ಮೈನುದ್ದೀನ್ ಅಲ್ತಾಫ್ ಅಹ್ಮದ್ ಸೇರಿದಂತೆ ಅನೇಕರು ಮನೆಗಳಲ್ಲಿಯೆ ಹಬ್ಬವನ್ನು ಆಚರಿಸುವ ಮೂಲಕ ಕೊರೊನಾ ನಿರ್ಮೂಲನೆಗೆ ಪ್ರಾರ್ಥಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here