ಜಾತೀಯತೆ,ಮೌಢ್ಯತೆ, ಕಂದಾಚಾರ ವಿರುದ್ಧ ಎದೆಗಾರಿಕೆ ತೋರಿದವರು ಬಸವಣ್ಣ

0
133
ಶಹಾಬಾದ: ನಗರದ ಕನ್ನಡ ಭವನದಲ್ಲಿ ಶುಕ್ರವಾರ ಕಸಾಪದಿಂದ ಬಸವ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.

ಶಹಾಬಾದ: ರಾಜಾಶಾಹಿ ವ್ಯವಸ್ಥೆ ಮತ್ತು ಜಾತೀಯತೆ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಸಮಾಜದ ಬೇರೂರಿದ್ದ ಜಾತೀಯತೆ, ಅಂಧಕಾರ, ಮೌಡ್ಯತೆ, ಕಂದಾಚಾರವನ್ನು ಹೋಗಲಾಡಿಸಲು ಅರಸನ ಆಡಳಿತದ ವಿರುದ್ಧ ದಿಟ್ಟ ಎದೆಗಾರಿಕೆ ತೋರಿದವರು ಅಣ್ಣ ಬಸವಣ್ಣನವರು ಎಂದು ಕಸಾಪ ಕಲಬುರಗಿ ಗ್ರಾಮೀಣ ಅಧ್ಯಕ್ಷ ಶರಣಗೌಡ ಪಾಟೀಲ ಹೇಳಿದರು.

ಅವರು ಶುಕ್ರವಾರ ನಗರದ ಕನ್ನಡ ಭವನದಲ್ಲಿ ಆಯೋಜಿಸಲಾದ ಬಸವ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ರಾಜಾಶಾಹಿ ವ್ಯವಸ್ಥೆಯಲ್ಲಿ ಮಂತ್ರಿಯಾಗಿ ಕೆಲಸ ನಿರ್ವಹಿಸುತ್ತ, ಸಮಾಜದಲ್ಲಿ ಮೇಳು-ಕೀಳು ಭಾವನೆಯನ್ನು ತೊಡೆದು ಹಾಕಲು ಅರಸನ ವಿರುದ್ಧ ಅಂದು ಅಂತರ್ಜಾತಿ ವಿವಾಹ ಮಾಡಿದ ಬಸವಣ್ಣನವರು ಪ್ರಪಂಚದ ಮೊಟ್ಟ ದಾರ್ಶನಿಕ ಪುರುಷ. ಜ್ಯೋತಿ ತಾನು ಬೆಳುಗುವುದಲ್ಲದೇ, ಇತರರಿಗೆ ಬೆಳಕು ಕೊಟ್ಟ ರೀತಿಯಲ್ಲಿ ಕುಲಕ್ಕೊಬ್ಬ ಶರಣರನ್ನು ಸೃಷ್ಠಿಸಿ, ಆಧ್ಯಾತ್ಮಿಕ ಸಂಸತ್ತು ಅನುಭವ ಮಂಟಪವನ್ನು ರೂಪಿಸಿದವರು ಬಸವಣ್ಣನವರು ಎಂದು ಹೇಳಿದರು.

ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರು: ಗುರಲಿಂಗಪ್ಪ

ಸಾಮಾಜಿಕ ಚಿಂತಕ ಗುರು ರೇವಣಸಿದ್ಧ ಪೂಜಾರಿ ಮಾತನಾಡಿ, ೧೨ನೇ ಶತಮಾನದಲ್ಲಿಯೇ ಸರ್ವರಿಗೂ ಸಮಪಾಲು, ಸಮಬಾಳು ಬಿತ್ತಿದಂಥ ಬೀಜ ಇಂದು ವಿಶ್ವದಾದ್ಯಂತ ಪಸರಿಸಿದೆ. ಅವರು ಎಂದಿಗೂ ಕೇವಲ ಹೇಳುವಂತವರಾಗಿರಲಿಲ್ಲ. ನುಡಿದಂತೆ ನಡೆದವರು.ವಿಪ್ರ ಸಮಾಜದಲ್ಲಿ ಹುಟ್ಟಿ ಅಲ್ಲಿನ ಗೊಡ್ಡು ಆಚರಣೆಗಳನ್ನು ತೀರಸ್ಕರಿಸಿ ಲಿಂಗಾಯತ ಧರ್ಮವನ್ನು ಕೊಟ್ಟರು.ಜಗತ್ತು ಇಂದು ಬಸವಣ್ಣವರನ್ನು ಒಪ್ಪಿಕೊಂಡಿದೆ ಮತ್ತು ಅಪ್ಪಿಕೊಂಡಿದೆ ಎಂದರೆ ಅದು ಅವರ ಕಾಯಕ, ದಾಸೋಹ ಹಾಗೂ ನುಡಿದಂತೆ ನಡೆಯುವ ತತ್ವಗಳಿಂದ ಮಾತ್ರ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕುಮಾರ ತೇಜಸ್.ಜಿ.ಪೂಜಾರಿ ವಚನಗಳ ಪಠಣ ಮಾಡಿದರು. ನಗರಸಭೆಯ ಸದಸ್ಯ ಮಲ್ಲಿಕಾರ್ಜುನ ವಾಲಿ,ಕಸಾಪ ನಗರಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ನಾಗಣ್ಣ ಬಿ ಪಾಟೀಲ, ಮರಲಿಂಗ ಕಮರಡಗಿ, ಅರುಣ ಜಾಯಿ,ರಮೇಶ್ ಜೊಗದನಕರ,ಶರಣಪ್ಪ ಪೂಜಾರಿ,ಬಸವರಾಜ ಕೊಳಕೂರ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here