ಸುರಪುರ: ನಗರದ ತಾಲೂಕು ಆಸ್ಪತ್ರೆಯಲ್ಲಿನ ಕೊರೊನಾ ಆಸ್ಪತ್ರೆಯಲ್ಲಿನ ನಲವತ್ತಕ್ಕೂ ಹೆಚ್ಚು ಜನ ಕೊರೊನಾ ಸೊಂಕಿತರಿಗೆ ರಾಜುಗೌಡ ಸೇವಾ ಸಮಿತಿ ನೇತೃತ್ವದಲ್ಲಿ ಕೊರೊನಾ ಸೊಂಕಿತರಿಗೆ ಯೋಗಭ್ಯಾಸ ಮಾಡಿಸಲಾಯಿತು.
ಯೋಗ ಶಿಕ್ಷಕ ಸಚಿನ ನಾಯಕ ಹಳ್ಳದಮನೆ ಅವರ ಮೂಲಕ ಎಲ್ಲಾ ಸೊಂಕಿತರಿಗೆ ಆಸ್ಪತ್ರೆಯ ಮೇಲ್ಭಾಗದಲ್ಲಿ ಶುಕ್ರವಾರ ಬೆಳಿಗ್ಗೆ ಯೋಗಭ್ಯಾಸ ಮಾಡಿಸಲಾಯಿತು,ಅಲ್ಲದೆ ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ತಾವೆಲ್ಲರು ಆದಷ್ಟು ಬೇಗನೆ ಕೊರೊನಾ ಸೊಂಕಿನಿಂದ ಗುಣಮುಖ ಹೊಂದಲಿದ್ದು ಯಾರುಕೂಡ ದೃತಿಗೆಡದಂತೆ ಧೈರ್ಯ ತುಂಬಿದರು.
ನಿತ್ಯವು ನೀವು ಹೀಗೆ ಯೋಗ ಮಾಡುವುದರಿಂದ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ,ಇದರಿಂದ ನೀವು ಮತ್ತಷ್ಟು ಬೇಗ ಗುಣಮುಖರಾಗಲಿದ್ದು ಸಾಧ್ಯವಾದಷ್ಟು ಸಮಯ ನಿತ್ಯವು ಯೋಗ ಮಾಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಲಕ್ಷ್ಮೀಕಾಂತ ದೇವರಗೋನಾಲ ಪರಶುರಾಮ ನಾಯಕ ಗಂಗಾಧರ ನಾಯಕ ಗುರುನಾಥ ರಡ್ಡಿ ಚೇತನ್ ರಮೇಶ ತಿಗಳಪ್ಪ ಕವಡಿಮಟ್ಟಿ ಸೇರಿದಂತೆ ಇತರರಿದ್ದರು.