ಜಾಲಿಬೆಂಚಿ ಮರಡಿ ಮಲ್ಲಿಕಾರ್ಜುನ ದೇವಸ್ಥಾನದ ಗೋಪುರಕ್ಕೆ ಬಡಿದ ಸಿಡಿಲು

0
52

ಸುರಪುರ: ತಾಲೂಕಿನ ಜಾಲಿಬೆಂಚಿ ಗ್ರಾಮದ ಆರಾಧ್ಯ ದೈವವಾಗಿರುವ ಶ್ರೀ ಮರಡಿ ಮಲ್ಲಿಕಾರ್ಜುನ ದೇವಸ್ಥಾನದ ಗೋಪುರಕ್ಕೆ ಭಾನುವಾರ ರಾತ್ರಿ ಸುರಿದ ಮಳೆಯ ಸಂದರ್ಭದಲ್ಲಿ ಸಿಡಿಲು ಬಡಿದು ಗೋಪುರ ತುಂಡಾಗಿದೆ.

ಗೋಪುರ ತುಂಡಾಗಿರುವ ಜೊತೆಗೆ ಗೋಪುರಕ್ಕೆ ಅಳವಡಿಸಲಾಗಿರುವ ಕಂಚಿನ ಕಳಸವು ಕೂಡ ತುಂಡಾಗಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.ಜೂನ್‍ನಲ್ಲಿ ಬರುತ್ತಿದ್ದ ಮುಂಗಾರು ಮಳೆ ಎರಡು ವಾರಗಳ ಮೊದಲೆ ಆರಂಭಗೊಂಡಿದ್ದು ಅನೇಕ ಕಡೆಗಳಲ್ಲಿ ಸಿಡಿಲಿನ ಅನಾಹುತಗಳು ಸಂಭವಿಸಿವೆ.

Contact Your\'s Advertisement; 9902492681

ಆದರೆ ಈಗ ದೇವಸ್ಥಾನದ ಗೋಪುರಕ್ಕೆ ಸಿಡಿಲು ಬಡಿದುರುವುದು ಜನರಲ್ಲಿ ದುಡುಗ ಮೂಡಿಸಿದೆ.ಘಟನೆಯ ಕುರಿತು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದ್ದು,ಕಂದಾಯ ಇಲಾಖೆ ಅಥವಾ ಮುಜರಾಯಿ ಇಲಾಖೆ ದೇವಸ್ಥಾನದ ಗೋಪುರ ನಿರ್ಮಾಣಕ್ಕೆ ನೆರವಾಗಬೇಕು ಎಂದು ಗ್ರಾಮಸ್ಥರು ಮನವಿಯನ್ನು ಮಾಡುತ್ತಿದ್ದು,ಗೋಪುರವನ್ನು ಹಾಗೆ ಬಿಡಬಾರದೆಂಬ ಕಾರಣಕ್ಕೆ ತಾತ್ಕಾಲಿಕವಾಗಿ ದುರಸ್ಥಿ ಮಾಡಿಸಲಾಗಿದ್ದು ಸಂಪೂರ್ಣ ನವೀಕರಣದ ಅವಶ್ಯವಿದೆ,ಅದಕ್ಕಾಗಿ ಸರಕಾರ ನೆರವಾಗಬೇಕು ಎನ್ನುವ ಬೇಡಿಕೆಯೂ ಈಗ ದೇವಸ್ಥಾನದ ಭಕ್ತರಿಂದ ಕೇಳಿಬಂದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here