ಸುರಪುರ: ನಗರದ ತಾಲೂಕು ಆಸ್ಪತ್ರೆಯಲ್ಲಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೊಂಕಿತರಿಗೆ ಆಸ್ಪತ್ರೆಯ ಮೇಲ್ಛಾವಣಿಯಲ್ಲಿ ಯೋಗಭ್ಯಾಸ ಮಾಡಿಸುವ ಮೂಲಕ ಸೊಂಕಿತರ ಆರೋಗ್ಯ ಚೇತರಿಕೆಗೆ ನೆರವಾಗಲಾಯಿತು.
ಸೋಮವಾರ ಸಂಜೆ ತಾಲೂಕು ಆಸ್ಪತ್ರೆಗೆ ಶಾಸಕ ನರಸಿಂಹ ನಾಯಕ (ರಾಜುಗೌಡ) ಭೇಟಿ ನೀಡಿ ಸೊಂಕಿತರ ಆರೋಗ್ಯ ವಿಚಾರಿಸುವ ಜೊತೆಗೆ ಧೈರ್ಯವನ್ನು ತುಂಬಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು,ತಾವ್ಯಾರುಕೂಡ ಕೊರೊನಾ ಸೊಂಕಿಗೆ ಭಯಪಡಬೇಡಿ ನಿಮ್ಮ ನೆರವಿಗೆ ಸದಾಕಾಲ ನಾವಿರುವುದಾಗಿ ತಿಳಿಸಿದರು.
ಅಲ್ಲದೆ ಯಾರಿಗಾದರೂ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ತಿಳಿಸಿ ಇಲ್ಲಿಯೇ ಉತ್ತಮವಾದ ಚಿಕಿತ್ಸೆ ಲಭ್ಯವಿದೆ,ಅಲ್ಲದೆ ಈಗ ಎಲ್ಲರಿಗೂ ಯೋಗಭ್ಯಾಸದ ಮೂಲಕ ಉಸಿರಾಟದ ಸಮಸ್ಯೆಯನ್ನು ದೂರಗೊಳಿಸಲು ಪ್ರಯತ್ನಿಸಲಾಗುತ್ತಿದೆ.ಆದ್ದರಿಂದ ತಾವೆಲ್ಲರು ನಿತ್ಯವು ತಪ್ಪದೆ ಯೋಗಭ್ಯಾಸ ಮಾಡಿ,ಯೋಗ ಮಾಡಿದರೆ ಯಾವ ರೋಗವು ಮನುಷ್ಯನಿಗೆ ಹತ್ತಿರ ಸುಳಿಯಲಾರವು,ಆದ್ದರಿಂದ ತಮಗಾಗಿ ನಿತ್ಯ ಯೋಗಾಭ್ಯಾಸಕ್ಕಾಗಿ ನಮ್ಮ ಸಹೋದರರು ಮುದಾಗಿದ್ದಾರೆ ಅವರೆಲ್ಲರಿಗು ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಅಲ್ಲದೆ ನಿಮಗೆ ಆಸ್ಪತ್ರೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದಲ್ಲಿ ತಿಳಿಸಿ ಅದನ್ನು ಪರಿಹರಿಸುವ ಕೆಲಸ ಮಾಡುವೆನು.ಯಾವುದೇ ಕಾರಣಕ್ಕೂ ತಾವ್ಯಾರು ಧೈರ್ಯ ಕಳೆದುಕೊಳ್ಳಬೇಡಿ ಉತ್ತಮವಾದ ಚಿಕಿತ್ಸೆ ಮತ್ತು ಇತರೆ ಸೌಲಭ್ಯವನ್ನು ಕಲ್ಪಿಸುವ ಮೂಲಕ ತಮ್ಮನ್ನು ಆರೋಗ್ಯಗೊಳಿಸಲಾಗುವುದು ಎಂದು ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರಾದ ಬಸವರಾಜ ಬಂಟನೂರ ಆರ್.ಎಸ್.ಎಸ್ ಸ್ವಯಂ ಸೇವಕ ಚೇತನ ನಾಯಕ ಹಾಗು ರಾಜುಗೌಡ ಸೇವಾ ಸಮಿತಿಯ ಲಕ್ಷ್ಮೀಕಾಂತ ದೇವರಗೋನಾಲ ಪರಶುರಾಮ ನಾಟೆಕರ್ ಗುರುನಾಥರಡ್ಡಿ ಶೀಲವಂತ ತಿಗಳಪ್ಪ ಕವಡಿಮಟ್ಟಿ ಮಲ್ಲಿಕಾರ್ಜುನ ಬಾದ್ಯಾಪುರ ಚೇತನ್ ವಾಗ್ಮೋರೆ ಪವನ ವಿಭೂತೆ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿದ್ದರು.