ಸೇಡಂ: ಸರ್ಕಾರ ರೈತರ ಪರವಾಗಿದೆ ಎಂದು ಬಾಯಿ ಮಾತಿನಿಂದ ಹೇಳಿದರೆ ಸಾಲದು ಅವರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಹೇಳಿದರು.
ಸೇಡಂ ಮತಕ್ಷೇತ್ರದ ಚಿಂತಪಳ್ಳಿ ಗ್ರಾಮದ ರೈತ ಫಕ್ರುದ್ದೀನ್ ಬೆಳೆದ ಕಲ್ಲಂಗಡಿ ಕೋವಿಡ್ 2ನೇ ಅಲೆಯಿಂದ ಮಾರಟವಾಗದೆ ಹಾಳಾಗಿದು ರೈತನ ಹೋಲಕ್ಕೆ ಭೇಟಿ ನೀಡಿ ವಯಕ್ತಿಕ ಧನ ಸಹಾಯ ಮಾಡಿ ಮಾತನಾಡಿ ಕರೋನ 2 ನೇ ಅಲೆಯಿಂದ ರೈತರು ತಾವು ಬೆಳೆದ ಹಣ್ಣು ಹಂಪಲು ತರಕಾರಿಗಳು ಮಾರುಕಟ್ಟೆಗೆ ಹಾಕಲಾಗದೆ ಅವರು ಬೆಳೆದಿರುವ ಹಣ್ಣು ತರಕಾರಿ ಹಾಳಾಗಿಹೋಗುತಿದೆ ರೈತರು ತುಂಬಾ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ ಕೂಡಲೆ ಸರ್ಕಾರ ರೈತನ ಪ್ರತಿ ಎಕರೆಗೆ 10 ಸಾವಿರ ಪರಿಹಾರ ನೀಡಬೇಕು ಹಾಗೂ ಸೇಡಂ ಮತಕ್ಷೇತ್ರದಲ್ಲಿ ರೈತರು ಬೆಳೆದ ಹಣ್ಣು ತರಕಾರಿ ನಷ್ಟ ವಾಗಿದು ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ ಆದಕಾರಣ ಕೂಡಲೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ತಹಸಿಲ್ದಾರರು ಸಮಿಕ್ಷೆ ಮಾಡಿ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಅಧ್ಯಕ್ಷ ಜಗನಾಥರೆಡ್ಡಿ ಗೊಟ್ಟೂರ, ಸಂತೋಷ ಕೇರೋಳ್ಳಿ,ಹಮೀದ ಪಟೇಲ್, ವಿಜಯಕುಮಾರ ಕುಲಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು .