ಕಲಬುರಗಿ: ರಾಜ್ಯಕ್ಕೆ ಇದುವರೆಗೆ ಕಪ್ಪು ಶಿಲೀಂಧ್ರ ರೋಗಕ್ಕೆ ನೀಡಲಾಗುವ ಸೂಮಾರು 10,370 ವಯಲ್ಸ್ ಎಂಪೋಟೇರಿಸಿನ್-ಬಿ ಚುಚ್ಚುಮದ್ದುಗಳನ್ನು ಕೇಂದ್ರ ಸರ್ಕಾರವು ಔಷಧಿಗಳ ಅಭಾವದ ಮಧ್ಯೆಯೂ ರಾಜ್ಯಕ್ಕೆ ಹೆಚ್ಚಿಗೆ ಪೂರೈಕೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಮವನ್ನು ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ ಅಭಿನಂದಿಸಿದ್ದಾರೆ.
ಈ ಚುಚ್ಚುಮದ್ದುಗಳ ಪೂರೈಕೆಯಿಂದ ಬ್ಯ್ಲಾಕ ಫಂಗಸನಿಂದ ಬಳಲುತ್ತಿರುವ ಸಾವಿರಾರು ಜನರ ಪ್ರಾಣ ಉಳಿಸಬಹುದಾಗಿದೆ. ಭಾರತಕ್ಕೆ ಇಂದು ಆಮದಾದ 80 ಸಾವಿರ ವಯಲ್ಸ್ ಎಂಪೋಟೇರಿಸಿನ್-ಬಿ ಚುಚ್ಚುಮದ್ದು ತಕ್ಷಣವೇ ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದ್ದು,ಅದರಲ್ಲಿ ರಾಜ್ಯಕ್ಕೆ 5190 ವಯಲ್ಸ್ ಪೂರೈಸಲಾಗಿದೆ ಈಗ ಮೋದಲು ಹಾಗೂ ಈಗಿನ ಚುಚ್ಚುಮದ್ದು ಸೇರಿದಂತೆ ಒಟ್ಟು 10,370 ವಯಲ್ಸ್ ಎಂಪೋಟೇರಿಸಿನ್-ಬಿ ಚುಚ್ಚುಮದ್ದು ಪೂರೈಕೆಯಾದಂತಾಗಿದೆ ಎಂದು ಅಂಬಾರಾಯ ಅಷ್ಠಗಿ ಹೇಳಿದ್ದಾರೆ.