ಅದ್ಯತಾ ವಲಯ,ಬೀದಿ ಬದಿ ವ್ಯಾಪಾರಿಗಳಿಗೆ ಕೋವಿಡ್ ಲಸಿಕೆ

0
61

ಚಿತ್ತಾಪುರ:ತಾಲೂಕಿನಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯವು ಪ್ರಗತಿಯಲ್ಲಿದ್ದು,ವಿಶೇಷವಾಗಿ 18 ರಿಂದ 44 ವರ್ಷದ ರಾಜ್ಯ ಗುರುತಿಸಿರುವ ವಿಶೇಷ ಗುಂಪಿನ ಫಲಾನುಭವಿಗಳು,ಕರೋನಾ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುವ ಕಾರ್ಯಕರ್ತರು, ಅದ್ಯತಾ ವಲಯದವರಿಗೆ ಗುರುತಿಸಿ ಲಸಿಕೆ ನೀಡುವ ಕಾರ್ಯ ಬಿರುಸಿನಿಂದ ಸಾಗಿದೆ.

ಶುಕ್ರವಾರ ಪಟ್ಟಣದ ಕೃಷಿ ಉತ್ಪನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ಅದ್ಯತಾ ವಲಯದಲ್ಲಿರುವ ವರ್ತಕರು,ಕಾರ್ಮಿಕರು,ಹಮಾಲರು,ಕಿರಾಣಾ ಅಂಗಡಿಯವರು, ಬೀದಿ ಬದಿ ವ್ಯಾಪಾರಿಗಳಾದ ತರಕಾರಿ,ಹಣ್ಣು ಮಾರುವರು ಸುಮಾರು 120ಕ್ಕೂ ಹೆಚ್ಚು ಜನರು ಲಸಿಕೆಯನ್ನು ಪಡೆದುಕೊಂಡರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ತಾಲೂಕ ವೈದ್ಯಾಧಿಕಾರಿ ದೀಪಕ್ ಪಾಟಿಲ್ ಅವರು ಮಾತನಾಡಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆಯನ್ನು ಪಡೆದುಕೊಂಡು ಸಾರ್ವಜನಿಕರು ಸಹಕಾರ ನೀಡಬೇಕು ,ಲಸಿಕೆ ಪಡೆದುಕೊಂಡವರು ಕೂಡ ಕೋವಿಡ್-19ನ ನಿಯಮಗಳನ್ನು ಪಾಲನೆ ಮಾಡಬೇಕು ಅತಿ ಅವಶ್ಯಕತೆ ಇದ್ದಾಗ ಮಾತ್ರ ಮನೆಯಿಂದ ಹೊರಗೆ ಬರಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ,ಉತ್ಪನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಸಿದ್ದುಗೌಡ ಅಫಜಲಪುರಕರ್, ಕಾರ್ಯದರ್ಶಿ ಸವಿತಾ ಗೋಣಿ,ವರ್ತಕರ ಸಂಘದ ಅಧ್ಯಕ್ಷ ಅಣ್ಣಾರಾವ ಪಾಟೀಲ್ ಮೂಡಬುಳ ,ಆರೋಗ್ಯ ಸಮಿತಿಯ ಸದಸ್ಯ ವೀರಣ್ಣಾ ಸುಲ್ತಾನಪುರ್,ಚಂದ್ರಶೇಖರ ಸಾತನೂರ್,ನಾಗರಾಜ ರೇಷ್ಮಿ,ಶರಣಬಸಪ್ಪ ಸಾತನೂರ್ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here