ಖ್ಯಾತ ಹಿಂದುಸ್ಥಾನಿ ಗಾಯಕಿ ನಿರ್ಮಲಾ ರಾಜಗುರುಗೆ ಕಸಾಪ ಅಧ್ಯಕ್ಷರ ಸನ್ಮಾನ

0
27

ಸುರಪುರ: ಖ್ಯಾತ ಹಿಂದುಸ್ಥಾನಿ ಗಾಯಕಿ ನಿರ್ಮಲಾ ರಾಜಗುರು ಅವರನ್ನು ನಗರದ ಅವರ ನಿವಾಸದಲ್ಲಿ ಕಸಾಪ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ದಂಪತಿಗಳು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀನಿವಾಸ ಜಾಲವಾದಿಯವರು,ನಿರ್ಮಲಾ ರಾಜಗುರು ಅವರೊಬ್ಬ ಬಹುದೊಡ್ಡ ಹಿಂದುಸ್ಥಾನಿ ಗಾಯಕರಾಗಿದ್ದು ಇವರು ಇಲ್ಲಿಯ ರಾಜಗುರುಗಳಾಗಿದ್ದು ಪ್ರತಿವರ್ಷ ನವರಾತ್ರಿ ಸಂದರ್ಭದಲ್ಲಿ ರಾಜಗುರುಗಳನ್ನು ವಾದ್ಯ ಸಮೇತ ಮೆರವಣಿಗೆ ಮಾಡುತ್ತ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕರೆದೊಯ್ಯುತ್ತಾರೆ ಎಂದರು.ಅಲ್ಲದೆ ನಿರ್ಮಲಾ ರಾಜಗುರು ಅವರು ಮಳಖೇಡದ ರಾಜಶ್ರೀ ಸಿಮೆಂಟ್ ಫ್ಯಾಕ್ಟರಿಯ ಸಿಬಿಎಸ್‌ಇ ಶಾಲೆಯಲ್ಲಿ ಸುಮಾರು ೩೨ ವರ್ಷ ಸಂಗೀತ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.

Contact Your\'s Advertisement; 9902492681

ಅನೇಕ ಕಡೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ ಹಾಗು ಅನೇಕ ಕವಿಗಳ ಭಕ್ತಿ ಗೀತೆಗಳನ್ನು ಹಾಡಿದ್ದಾರೆ.ಯಾದಗಿರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರು ಗೌರವ ಸನ್ಮಾನಕ್ಕೂ ಭಾಜನರಾಗಿದ್ದಾರೆ ಎಂದು ತಿಳಿಸಿದರು.

೬೪ ವರ್ಷದ ತುಂಬು ಜೀವನದುದ್ದಕ್ಕೂ ಸಂಗೀತ ಸೇವೆ ಮಾಡಿದ ಗಾಯಕಿಯವರನ್ನು ಸನ್ಮಾನಿಸುತ್ತಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ ಎಂದರು.ಈ ಸಂದರ್ಭದಲ್ಲಿ ಶಕುಂತಲಾ ಶ್ರೀನಿವಾಸ ಜಾಲವಾದಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here