ಧಾರಾಕಾರ ಮಳೆ: ಸಿಡಿಲು ಬಡಿದು ಎತ್ತು ಸಾವು

0
46

ಕಮಲಾಪುರ: ತಾಲ್ಲೂಕಿನಾದ್ಯಂತ ಗುರುವಾರ ರಾತ್ರಿ ಧಾರಾಕಾರ ಮಳೆ ಸುರಿದಿದೆ.

ತಾಲ್ಲೂಕಿನ ಮಡಕಿ ಗ್ರಾಮದ ವಿಕಾಸ ಬಾಬು ಭಾವಿಮನಿ ಅವರಿಗೆ ಸೇರಿದ್ದ ಎತ್ತು ರಾತ್ರಿ ಸಿಡಿಲು ಬಡಿದು ಮೃತಪಟ್ಟಿದೆ.
ಹೊಲದಲ್ಲಿ ಜೋಳದ ರಾಶಿ ಮಾಡಿಕೊಂಡು ಅಲ್ಲಿಯೆ ಎತ್ತು ಕಟ್ಟಿ ಮನೆಗೆ ಮರಳಿದ್ದಾರೆ.

Contact Your\'s Advertisement; 9902492681

ರಾತ್ರಿ ಗುಡುಗು ಸಹಿತ ಜೋರಾಗಿ ಮಳೆ ಸುರಿದಿದ್ದು ಎತ್ತಿನ ಮೇಲೆ ಸಿಡಿಲೆರಗಿದೆ. ಬೆಳಿಗ್ಗೆ ನೋಡುವಷ್ಟರಲ್ಲಿ ಎತ್ತು ಸ್ಥಳದಲ್ಲೆ ಮೃತಪಟ್ಟಿರುವುದು ಕಂಡುಬಂದಿದೆ. ಅಂಬಲಗಾ ಪಶುವೈದ್ಯಧೀಕಾರಿ ಭೇಟಿನೀಡಿ ಪಂಚನಾಮೆ ಮಾಡಿದ್ದಾರೆ. ಈ ಕುರಿತು ನರೋಣಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೋಗದ ರಾಶಿಗೆ ಅಡ್ಡಿ: ತಾಲ್ಲೂಕಿನಲ್ಲಿ ಈಗಾಗಲೆ ಜೋಳ ರಾಶಿ ಆರಂಭಗೊಂಡಿದ್ದು, ಕಟಾವು ಕಾರ್ಯ ಭರದಿಂದ ಸಾಗಿದೆ. ಫಸಲು ಕಟಾವು ಮಾಡಿ ನೆಲದಡಿ ಹಾಕಿದ್ದು ಮಳೆಗೆ ಮಣ್ಣು ಸೇರಿ ಧಾನ್ಯ ಕಪ್ಪಾಗುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here