ಕಲಬುರಗಿ: ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿರಂತರವಾಗಿ ಏರಿಸುವ ಮೂಲಕ ಕೊರೊನಾದಿಂದ ಸಂಕಷ್ಟದಲ್ಲಿರುವ ಜನರ ಗಾಯದ ಮೇಲೆ ಬರೆ ಹಾಕುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಶಹಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಶಿರವಾಳ ಗ್ರಾಮದ ಶ್ರೀ ಸುಜ್ಞಾನೇಶ್ವರ ಪೆಟ್ರೊಲ್ ಬಂಕ್ ಮುಂಭಾಗದಲ್ಲಿ #Petrol100NotOut ಎಂಬ ಆಂದೋಲನದ ಹೆಸರಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ನೀಲಕಂಠ ಬಡಿಗೇರ ಜೆಟ್ಟೆಪ್ಪ ಸಾಗರ ಅಂಬ್ರೇಶ ಇಟಗಿ ಗ್ರಾಮ ಪಂಚಾಯಿತಿ ಸದಸ್ಯರು ಇಟಗಿ ಹಾಗೂ ಶಿರವಾಳ ಗ್ರಾಮ ಪಂಚಾಯಿತಿ ಸದಸ್ಯರು ಶರಣಬಸವ ಚಪಾಟ್ಲಿ ಶಬ್ಬಿರ ನರಬೋಳಿ ಶಿರವಾಳ ಕೆ ಪಿ ಸಿ ಸಿ ಸೋಶಿಯಲ್ ಮೀಡಿಯಾ ಅಧ್ಯಕ್ಷ ಶಿವು ಆಂದೋಲಾ ಬಲಭೀಮ ನಡಿವಿನಕೇರಿ ಭೀಮರಾಯ ಕುಸ್ತಿ ಹಣಮಂತ ಚಪಾಟಿಲ ಬಾಷಸಾಬ ಮಳ್ಳಿ ಹಾಗೂ ಶಿರವಾಳ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.