ದೇಹಾರೋಗ್ಯಕ್ಕೆಯೋಗ, ಧ್ಯಾನವಿರಲಿ

0
40
ಡಾ. ಗಂಗಾಧರಯ್ಯ ಹಿರೇಮಠ ಪ್ರಾಧ್ಯಾಪಕರು ಸ.ಪ್ರ.ದ ಮಹಿಳಾ ಕಾಲೇಜು, ದಾವಣಗೆರೆ.

ಪ್ರತಿಯೊಬ್ಬರುತಮ್ಮದೇಹಾರೋಗ್ಯಕ್ಕೆ, ಶಾಂತಿ, ನೆಮ್ಮದಿಗಾಗಿ ಭಾರತೀಯ ಸಂಸ್ಕೃತಿಯ ಪ್ರತೀಕವಾದಯೋಗ, ಧ್ಯಾನ ಹಾಗೂ ಪ್ರಾಣಾಯಮಕ್ಕೆ ಹೆಚ್ಚಿನ ಮಹತ್ವಕೊಡುವುದುಅತ್ಯಂತಜರೂರಿನ ಸಂಗತಿಯಾಗಿದೆ.‘ಯೋಗ’ ಎಂದರೆ ಕೇವಲ ಆಸನಗಳು, ಪ್ರಾಣಾಯಮ, ಧ್ಯಾನ ಹಾಗೂ ತಪಸ್ಸು ಎಂಬ ಕಲ್ಪನೆಯೇಆಗಿದೆ. ‘ಯೋಗ’ ಎಂದರೆಅದೊಂದು ಬದುಕಿನ ಕಲೆ.Yoga is aart of life. ನಾವು ಬದುಕುವುದು ಏಕೆ?ಬದುಕುವುದು ಹೇಗೆ? Why to live? How to live ಎಂದು ತಿಳಿಸುವ ಬದುಕಿನಕಲೆಯೇಯೋಗಎಂದು ತಿಳಿಯಬಹುದು. ‘ಯುಜ್ಯತೇಇತಿಯೋಗ’: ಈ ಯೋಗದ ಶಬ್ದ ವ್ಯಾಪಕಅರ್ಥದಲ್ಲಿ ಗಮನಿಸಬಹುದು. ಉದ್ಯೋಗ ಸಿಕ್ಕರೂ ಯೋಗ, ವಿವಾಹವಾದರೂಯೋಗ, ಲಾಟರಿ ಹೊಡೆದರೂಯೋಗ, ಮನೆ ಕಟ್ಟಿಸಿದರೂ ಯೋಗ, ಆಸ್ತಿ ಖರೀದಿಸಿದರೂ ಯೋಗ, ಹೀಗೆ ಎಲ್ಲವೂಯೋಗವೇ.ನಮ್ಮ ಚಂಚಲ ಮನಸ್ಸು, ವೇಗ ಹಾಗೂ ಸೂಕ್ಷ್ಮತೆಗಳನ್ನು ಜಡವಾದ ಶರೀರದೊಡನೆ ಸೇರಿಸುವುದು ‘ಯೋಗ’ವೇ ಆಗಿದೆ.

ಯೋಗ ಪಿತಾಮಹ ಪತಂಜಲಿ ಮುನಿಗಳು ತಿಳಿಸುವಂತೆ “ಚಿತ್ತವೃತ್ತಿಗಳ ನಿರೋಧಅಥವಾ ನಿಯಂತ್ರಿಸುವುದೇಯೋಗ” ಎಂದಿರುವರು. ಹಾಗೆಯೇ ಮನಸ್ಸನ್ನು ಪ್ರಶಮನಗೊಳಿಸುವ, ಶಾಂತಗೊಳಿಸುವ ಉಪಾಯವೇಯೋಗ. ಒಟ್ಟಾರೆ ‘ಯೋಗವು’ ಒಂದು ಶುದ್ಧ ಮನಃಶಾಸ್ತ್ರ.ಯೋಗದಲ್ಲಿ ನಾಲ್ಕು ಪಥಗಳಿವೆ, ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ ಹಾಗೂ ರಾಜಯೋಗ.ಶಾರೀರಕದೃಢತೆ ಮತ್ತು ಮಾನಸಿಕ ಸ್ಥಿರತೆ ಈ ಎರಡನ್ನು ಯೋಗಾಸನಗಳು ನೀಡುತ್ತವೆ. ಶರೀರದಜೊತೆಗೆ ಮನಸ್ಸನ್ನು ಪಳಗಿಸುವ ಕ್ರಿಯೆಇಲ್ಲಿದೆ.ಅಭ್ಯಾಸಕ್ಕೆಅನುಗುಣವಾಗಿ ಆಸನಗಳನ್ನು ಬೆನ್ನಿನ ಮೇಲೆ ಮಲಗಿ, ಹೊಟ್ಟೆಯ ಮೇಲೆ ಮಲಗಿ, ಕುಳಿತು ಹಾಗೂ ನಿಂತು ಮಾಡುವ ಆಸನಗಳೆಂದು ನಾಲ್ಕು ವಿಧಗಳಿವೆ.ಪರಿಣಾಮದದ್ರಷ್ಠಿಯಿಂದ ಆಸನಗಳನ್ನು ನಿರ್ಮಾಣಾತ್ಮಕ, ಧ್ಯಾನಾತ್ಮಕ ಹಾಗೂ ವಿಶ್ರಾಂತಿದಾಯಕ ಆಸನಗಳೆನ್ನಬಹುದು.ಇಲ್ಲಿ ಗಮನಿಸಬೇಕಾದಅಂಶವೆಂದರೆ ನಿಧಾನಗತಿ, ಸೂಕ್ಷ್ಮಗಮನ, ಪ್ರಸನ್ನತೆ, ಉಸಿರಾಟದೊಡನೆ ಅಭ್ಯಾಸ ಹಾಗೂ ಅಂತಿಮ ಸ್ಥಿತಿ ಕಾಯ್ದುಕೊಳ್ಳುವುದು ಅಗತ್ಯವಾಗಿದೆ.ಸೂರ್ಯನಮಸ್ಕಾರದಿಂದಆರಂಭವಾಗಿ ಶವಾಸನದವರೆಗೆ ೪೩ ಆಸನಗಳಿವೆ. ಘೇರುಂಡ ಸಂಹಿತೆಯಲ್ಲಿ ೮೪ ಪ್ರಕಾರಗಳನ್ನು ತಿಳಿಸಿದೆ.

Contact Your\'s Advertisement; 9902492681

‘ಯೋಗ’ ನಮ್ಮದೇಶದ ವಿಶಿಷ್ಟ ಕೊಡುಗೆ, ಸಂಸ್ಕೃತಿಯ ಪ್ರತೀಕ.ಇಂದುಜಾಗತಿಕ ಮಹತ್ವದೊರಕಿರುವುದು ಸಂತಸದ ಸಂಗತಿ.ಈ ಕುರಿತು ಅನೇಕ ಪ್ರಾಚೀನ ಗ್ರಂಥಗಳು ಪ್ರಕಟವಾಗಿವೆ. ಇದುಏನನ್ನೂತೊರೆಯಬೇಕೆಂದು ಹೇಳುವ ತತ್ವವಲ್ಲ. ಮನಸ್ಸನ್ನು ನಿಯಂತ್ರಿಸುವ, ಏಕಾಗ್ರತೆ ಸಾಧಿಸಲುಉಪಯುಕ್ತವಾದದ್ದು.ಅಭ್ಯಾಸ, ಪ್ರಯತ್ನಗಳಿಂದ ಶರೀರದ ಬೇರೆ ಬೇರೆ ಅಂಗಗಳಿಗೆ, ಸ್ಯಾಯುಗಳಿಗೆ ಮತ್ತು ನರನಾಡಿಗಳಿಗೆ ಸುಖವ್ಯಾಯಮದಿಂದ ಹೊಸ ಚೈತನ್ಯ ನೀಡಬಹುದೆಂಬುದನ್ನುಯೋಗವು ವೈಜ್ಞಾನಿಕ ವಿಧಾನದಲ್ಲಿ ತಿಳಿಸುತ್ತದೆ.ಪತಂಜಲಿ, ಘೋರಂಡ ಮುಂತಾದಯೋಗ ವಿಜ್ಞಾನಿಗಳು ತಿಳಿಸುವಂತೆ ಯೋಗಾಸನಗಳಲ್ಲಿ ಸ್ಥಿರಸುಖ ಇರಬೇಕುಎಂದು, ಸ್ಥಿರತೆ ಮತ್ತು ಸುಖತ್ವಗಳು ಯೋಗಾಸನದ ಲಕ್ಷಣಗಳು.ಇದು ‘ಪ್ರಯತ್ನ ಶೈಥಿಲ್ಯ’ ವಿರಬೇಕು.

ಯೋಗದಿಂದ ಮನಸ್ಸಿನ ಕ್ಲೇಶವನ್ನು ನಿವಾರಿಸಲು ಪತಂಜಲಿ ಮಾರ್ಗ ಸೂಕ್ತವಾಗಿದೆ.ಅಭ್ಯಾಸ – ಪ್ರಯತ್ನಗಳಿಂದ ನಿಶ್ಚಲವಾದ ಮನಸ್ಸನ್ನು ಸ್ಥಾಪಿಸಿಕೊಳ್ಳುವುದು ಯೋಗದ ಪ್ರಮುಖ ಭೂಮಿಕೆ. ‘ಯೋಗ’ ಎಂಬುದುಉದ್ಧೇಶ ಮತ್ತು ಹಾದಿಗಳೆರಡನ್ನು ಸೂಚಿಸುವ ಪದ.ಏನನ್ನು ಪಡೆಯಬೇಕೋಅದುಯೋಗ; ಅದನ್ನು ಪಡೆಯಲುಇರುವ ಸಾಧನವೂಯೋಗ.ಅಭ್ಯಾಸ ಮಾಡುವವರತಪ್ಪಿನಿಂದಾಗಿಯೋಗಶಾಸ್ತ್ರದ ಫಲವಂತಿಕೆಯ ಬಗ್ಗೆ ‘ಯೋಗ’ ಕುರಿತ ಅನುಮಾನಗಳಿವೆ.

ದೇಹ ಮತ್ತು ಮನಸ್ಸನ್ನು ಸಮತೋಲನಗೊಳಿಸುವ ಯೋಗದ ಸಾಧನೆಗೆಧ್ಯಾನವುಒಂದು ಪರಿಕರಎನ್ನಬಹುದು. ಧ್ಯಾನಕ್ಕೆ ವಿಶಿಷ್ಟ ಸ್ಥಾನವಿದೆ. ಶರೀರವುಗಡಸುತನವನ್ನು ಬಿಟ್ಟುಕೊಟ್ಟು, ಮನಸ್ಸು ವ್ಯಥಾಅಲೆಯುವುದನ್ನು ತಪ್ಪಿಸಿ, ಏಕತಾನತೆಯನ್ನು ಮೈಗೂಡಿಸಿಕೊಳ್ಳುವುದೇ ಧ್ಯಾನ.ಯೋಗದಒಂದು ಭಾಗಧ್ಯಾನವಾಗಿದೆ.ಮಿದುಳಿನ ಬಲಭಾಗವನ್ನು ಉತ್ತೇಜನಗೊಳಿಸುವುದು ಧ್ಯಾನದಆಶಯ.

ಸದೃಡಆರೋಗ್ಯವಂತ ಶರೀರಹೊಂದಲು ಶಾರೀರಿಕ ಪರಿಶ್ರಮಅಗತ್ಯ.ನಗರವಾಸಿಗಳು ಅಂತಹ ಅವಕಾಶಗಳಿಂದ ವಂಚಿತರಾಗಿದ್ದಾರೆ.ಮಾನಸಿಕ ಪರಿಶ್ರಮಕ್ಕಿರುವಆದ್ಯತೆದೇಹಶ್ರಮಕ್ಕಿಲ್ಲ.ಸಮಯದಅಭಾವ, ಯಂತ್ರಗಳನ್ನು ಬಳಸುವುದು, ಕಲುಷಿತ ವಿಷಕಾರಕ ವಸ್ತುಗಳ ಸೇವನೆ, ಅಶುದ್ಧಗಾಳಿ, ನೀರು ಹೀಗೆ ಹಲವು ಕಾರಣಗಳು ಇದರಿಂದ ಹಲವು ರೋಗಗಳಿಗೆ ನಾವು ತುತ್ತಾಗುತ್ತಿದ್ದೇವೆ. ಪ್ರತಿದಿನ ಒಂದುಗಂಟೆಯೋಗಭ್ಯಾಸಕ್ರಮದಲ್ಲಿತೊಡಗಿಕೊಂಡರೆ ಅಂಗಾಂಗಗಳಿಗೂ ಸೂಕ್ತವಾದ ವ್ಯಾಯಾಮದೊರೆತುಆರೋಗ್ಯವರ್ಧನೆಗೆ ಪೂರಕವಾಗುತ್ತದೆ.ವಿವಿಧ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಯೋಗಭ್ಯಾಸ ಕ್ರಮದಲ್ಲಿ ಅಡಗಿದೆ ಎಂಬುದನ್ನು ಅಂತರ್‌ರಾಷ್ಟ್ರೀಯಯೋಗದಿನವಾದಇಂದುಇದರ ಮಹತ್ವಅರಿತು – ಆಚರಿಸೋಣ, ಉತ್ತಮಆರೋಗ್ಯಕ್ಕೆ ಚಿಂತನಶೀಲರಾಗೋಣ.

ಸದೃಢ ಶರೀರ ಹಾಗೂ ಸ್ವಸ್ಥ ಮನಸ್ಸಿಗೆ ಯೋಗ – ಧ್ಯಾನ ಮಾರ್ಗ ಮಹತ್ವದ್ದು.ಯೋಗ, ಧ್ಯಾನ ಮತ್ತು ನೈತಿಕ ಶಿಕ್ಷಣ ವಿದ್ಯಾರ್ಥಿದಿಸೆಯಿಂದಲೇ ಆರಂಭಗೊಳ್ಳಬೇಕು, ಅಂದಾಗ ಸುಸ್ಥಿರ ಸಮಾಜದ ಬುನಾದಿ ಆಗಬಲ್ಲದು. ವೈದ್ಯಕೀಯಕ್ಷೇತ್ರದ ಬೆಳವಣೆಗೆಯೊಂದಿಗೆ ಜನರಅನಾರೋಗ್ಯ ವ್ಯವಸ್ಥೆ ದ್ವಿಗುಣಗೊಳ್ಳುತ್ತಿದೆ, ಇದಕ್ಕೆಕಾರಣ ಹಲವು. ನಮ್ಮಗ್ರಾಮೀಣರು ಶತಾಯುಷಿಗಳಾಗಿ ಒಂದು ದಿನವು ವೈದ್ಯರ ಹತ್ತಿರ ಹೋಗದೇ ಬದುಕಿಬಾಳಿದ್ದು ನೆನಪಿಸಿಕೊಳ್ಳೋಣ.ಕಾರಣದೈಹಿಕಶ್ರಮ, ನಗರವಾಸಿಗಳಾದ ನಮಗೆ ಹಲವು ಬಗೆಯ ಒತ್ತಡಗಳಿವೆ. ದಿನನಿತ್ಯದ ಬದುಕಿನಒತ್ತಡ, ಉದ್ವೇಗ, ಅತೃಪ್ತಿಗಳಿಗೆ ನಿಯಂತ್ರಣ ಸಾಧಿಸುವಲ್ಲಿಯೋಗ ಮತ್ತುಧ್ಯಾನ ಪರಿಹಾರಒದಗಿಸಬಲ್ಲದುಎಂಬುದು ನನ್ನಆಶಯ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here