ವಾಡಿ: ವಿವಿಧ ಅಭಿವೃದ್ಧಿಗೆ ಕಾಮಗಾರಿ ಕೈಗೊಳ್ಳುವಂತೆ ಸಂಸದ ಜಾಧವ್ ಗೆ: ಯಾರಿ ಮನವಿ

0
30

ಚಿತ್ತಾಪುರ:ತಾಲೂಕಿನ ವಾಡಿ ಪಟ್ಟಣದಲ್ಲಿ ಅವಶ್ಯಕವಿರುವ ಕಾಮಗಾರಿಗಳನ್ನು ಶೀಘ್ರವಾಗಿ ಕೈಗೊಂಡು ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕೆಂದು ಬೆಂಗಳೂರಿನಲ್ಲಿ ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಾಧವ್ ಅವರಿಗೆ ವಾಡಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ ಮನವಿ ಪತ್ರ ಸಲ್ಲಿಸಿದರು.

ಪಟ್ಟಣದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ವಾಸಿಸುತ್ತಿದ್ದು,ಸಿಮೆಂಟ್ ಕಾರ್ಖಾನೆ ಮತ್ತು ರೈಲ್ವೆ ಜಂಕ್ಷನ್ ಹೊಂದಿದ್ದು,ನಾನಾ ಭಾಗಗಳಿಂದ ಜನ ಬರುತ್ತಾರೆ.ಜೊತೆಗೆ ಇಲ್ಲಿ ವಾಸವಾಗಿದ್ದಾರೆ.

Contact Your\'s Advertisement; 9902492681

ಪಟ್ಟಣದಲ್ಲಿ ಜನತೆ ನಿರಂತರ ನೀರಿನ ಸಮಸ್ಯೆಯನ್ನು ಅನುಭವಿಸುತ್ತಿರುವುದರಿಂದ, ಶಾಶ್ವತ ಪರಿಹಾರಕ್ಕೆ  ವಿದ್ಯುತ್ ಎಕ್ಸ್ಪ್ರೆಸ್ ಲೈನ್ ಅನ್ನು ಜೋಡಿಸಿ,ಅದರ ನಿರ್ವಹಣೆ ಜಲ ಮಂಡಳಿಗೆ ವಹಿಸಬೇಕು, ಪದವಿ,ಪದವಿ ಪೂರ್ವ ಕಾಲೇಜುಗಳ ಪ್ರಾರಂಭಿಸುವುದು, ಸಾರ್ವಜನಿಕ ಉದ್ಯಾನವನ,ಆಟದ ಮೈದಾನ,ಗ್ರಂಥಾಲಯ ಸೇರಿದಂತೆ ಸಾರ್ವಜನಿಕ ಶೌಚಾಲಯ ಗಳ ಕಾಮಗಾರಿ ಶೀಘ್ರವಾಗಿ ಕೈಗೊಳ್ಳುವುದು,ರೈಲ್ವೆ ನಿಲ್ದಾಣದಲ್ಲಿ ವಯಸ್ಕರ ಅಂಗವಿಕಲರ, ರೋಗಿಗಳ ಅನುಕೂಲಕ್ಕಾಗಿ ಏಕ್ಸಿಲೇಟರ್ ಜೋತೆಗೆ ರೈಲು ನಿಲ್ದಾಣಕ್ಕೆ ಬಸ್ಸು ಸಂಚಾರ ಕಲ್ಪಿಸುವುದು, ವಿದ್ಯುತ್ ಚಿತಾಗಾರಾ,ಅಂತಿಮ ಯಾತ್ರೆಯ ಸಲುವಾಗಿ ವಾಹನ,ಪುರಸಭೆ ಕಾರ್ಯಲಯದ ಕಟ್ಟಡದ ನಿರ್ಮಾಣ ತ್ವರಿತ ಗತಿಯಲ್ಲಿ ಕೈಗೊಂಡು ಪಟ್ಟಣದ ಕಾಮಗಾರಿಗಾಗಿ  ಸಂಬಂಧಿಸಿದವರಿಗೆ ಸೂಚಿಸುವಂತೆ ಪತ್ರದ ಮುಖಾಂತರ ಮನವಿ ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here