ಚಿತ್ತಾಪುರ: ನಾಸರಾಜಂಗ ಕುಡಿಯುವ ನೀರಿನ ಸಮಸ್ಯೆ:ಪುರಸಭೆಗೆ ಮನವಿ

0
27

ಚಿತ್ತಾಪುರ:ಪಟ್ಟಣದ ವಾರ್ಡ ನಂ.8  ನಾಸರಜಂಗ ಏರಿಯಾದಲ್ಲಿ ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿಯುವ ನೀರು ಬರುತ್ತಿಲ್ಲ ಖಾಲಿ ಕೊಡಗಳನ್ನು ಹಿಡಿದುಕೊಂಡು  ಪುರಸಭೆಯ ಅಧ್ಯಕ್ಷ ಚಂದ್ರಶೇಖರ ಕಾಶಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದರು.

ಈ ಏರಿಯಾ ಸ್ವಲ್ಪ ಎತ್ತರದಲ್ಲಿದು, ಸುಮಾರು 100 ರಿಂದ 150ಕ್ಕಿಂತ ಹೆಚ್ಚು ಮನೆಗಳು ಇವೆ.ಸುಮಾರು ವರ್ಷಗಳಿಂದ ನೀರಿನ ಸಮಸ್ಯವಿದೆ.ಯಾರು ಕೂಡ ಈ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡುತ್ತಿಲ್ಲಾ.

Contact Your\'s Advertisement; 9902492681

ಸಾರ್ವಜನಿಕರು ನೀರಿಗಾಗಿ ಪರದಾಡುವ ಪರಿಸ್ಥಿತಿ ಇದೆ.ಕುಡಿಯುವ ನೀರಿಗಾಗಿ 1 ಕಿಲೋಮೀಟರ್ ನಡೆದುಕೊಂಡು ಹೋಗಿ ನೀರು ತರಬೇಕಾಗಿದೆ.ಈ ಸಮಸ್ಯೆಯನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು ಏನು ಪ್ರಯೋಜನೆ ಆಗಿಲ್ಲಾ ಎಂದು ಅಲ್ಲಿಯ ನಿವಾಸಿಗಳು ತಮ್ಮ ಅಳಿಲನ್ನು ತೋಡಿಕೊಂಡರು.

ಈ ಸಂದರ್ಭದಲ್ಲಿ ಪುರಸಭೆ ವಿರೋಧ ಪಕ್ಷದ ನಾಯಕ ನಾಗರಾಜ ಭಂಕಲಗಿ,ಪುರಸಭೆ ಸದಸ್ಯ ಸಂತೋಷ ಚೌದ್ರಿ,ರಾಜು ರಾಠೋಡ, ವಿಠಲ್ ಚೌಹಾಣ್,ಯಮನಪ್ಪ ಬೋಸಗಿ,ಮನೋಹರ್ ರಾಠೋಡ, ವೆಂಕಟೇಶ್ ಚೌಹಾಣ್,ರಾಜು ಸೇರಿದಂತೆ ಅನೇಕ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here