ಚಿತ್ತಾಪುರ:ಪಟ್ಟಣದ ವಾರ್ಡ ನಂ.8 ನಾಸರಜಂಗ ಏರಿಯಾದಲ್ಲಿ ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿಯುವ ನೀರು ಬರುತ್ತಿಲ್ಲ ಖಾಲಿ ಕೊಡಗಳನ್ನು ಹಿಡಿದುಕೊಂಡು ಪುರಸಭೆಯ ಅಧ್ಯಕ್ಷ ಚಂದ್ರಶೇಖರ ಕಾಶಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದರು.
ಈ ಏರಿಯಾ ಸ್ವಲ್ಪ ಎತ್ತರದಲ್ಲಿದು, ಸುಮಾರು 100 ರಿಂದ 150ಕ್ಕಿಂತ ಹೆಚ್ಚು ಮನೆಗಳು ಇವೆ.ಸುಮಾರು ವರ್ಷಗಳಿಂದ ನೀರಿನ ಸಮಸ್ಯವಿದೆ.ಯಾರು ಕೂಡ ಈ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡುತ್ತಿಲ್ಲಾ.
ಸಾರ್ವಜನಿಕರು ನೀರಿಗಾಗಿ ಪರದಾಡುವ ಪರಿಸ್ಥಿತಿ ಇದೆ.ಕುಡಿಯುವ ನೀರಿಗಾಗಿ 1 ಕಿಲೋಮೀಟರ್ ನಡೆದುಕೊಂಡು ಹೋಗಿ ನೀರು ತರಬೇಕಾಗಿದೆ.ಈ ಸಮಸ್ಯೆಯನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು ಏನು ಪ್ರಯೋಜನೆ ಆಗಿಲ್ಲಾ ಎಂದು ಅಲ್ಲಿಯ ನಿವಾಸಿಗಳು ತಮ್ಮ ಅಳಿಲನ್ನು ತೋಡಿಕೊಂಡರು.
ಈ ಸಂದರ್ಭದಲ್ಲಿ ಪುರಸಭೆ ವಿರೋಧ ಪಕ್ಷದ ನಾಯಕ ನಾಗರಾಜ ಭಂಕಲಗಿ,ಪುರಸಭೆ ಸದಸ್ಯ ಸಂತೋಷ ಚೌದ್ರಿ,ರಾಜು ರಾಠೋಡ, ವಿಠಲ್ ಚೌಹಾಣ್,ಯಮನಪ್ಪ ಬೋಸಗಿ,ಮನೋಹರ್ ರಾಠೋಡ, ವೆಂಕಟೇಶ್ ಚೌಹಾಣ್,ರಾಜು ಸೇರಿದಂತೆ ಅನೇಕ ಇದ್ದರು.