ಕಲಬುರಗಿ: ನಗರದ ಟಿಟಿಐ ಉಮೆನ್ಸ್ ಕಾಲೇಜಿನಲ್ಲಿ ಭಾರತ ಸ್ಕಟ್ಸ ಮತ್ತು ಗೈಡ್ಸ ಕರ್ನಾಟಕ ಜಿಲ್ಲಾ ಸಂಸ್ಥೆ ಹಾಗೂ ಸ್ಥಳಿಯ ಸಂಸ್ಥೆ ಕಲಬುರಗಿ ದಕ್ಷಿಣ ವತಿಯಿಂದ ಮೇ 19 ಮತ್ತು 22 ರಂದು 40 ಎಸ್ಎಸ್ಎಲ್ಸಿ ಪರೀಕ್ಷೆ ಕೇಂದ್ರಗಳಲ್ಲಿ ಸ್ವಯಂ ಸೇವಕರಿಗೆ ಮಾಸ್ಕ್ ಮತ್ತು ಜ್ಯೂಸ್ ಮತ್ತು ಬಿಸ್ಕೆಟ್ ಪ್ಯಾಕೆಟ್ಗಳನ್ನು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಂಕ್ರಮ್ಮ ಧವಳಗಿ ಅವರು ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸುಜಾತ ಇ. ಮುಲ್ಲಾ, ಕಾರ್ಯದರ್ಶಿ ಚನ್ನರಾಯಸ್ವಾಮಿ, ಕಾಲೇಜಿನ ಪ್ರಾಚಾರ್ಯ ಬಸವಂತ ಬಾಯಿ ಅಕ್ಕಿ, ಕಲಬುರ್ಗಿ ದಕ್ಷಿಣ ವಲಯದ ಕಾರ್ಯದರ್ಶಿ ಅಮರೇಶ್ ಕೋರಿ, ಜಿಲ್ಲಾ ತರಬೇತಿ ಆಯುಕ್ತೆ ಸಮಂಗಲಾ ಕೋರಿ, ಗೀತಾ ಪಾಟೀಲ್, ಕೊತಲೆ ಭೀಮರಾಯ, ಹಣಮಂತ, ಶಿವಲೀಲಾ, ಅಪರ್ಣ, ಡಾ. ನಾಗಪ್ಪ ಗೋಗಿ, ಪ್ರೋ.ಕೋಟ್ಲೆ ಭೀಮರಾಯ ಹನುಮಂತ, ಡಾ. ಗೀತಾ ಪಾಟೀಲ್, ಡಾ.ರೇಖಾ ಅಣ್ಣಿಗೇರಿ ,ಸಂತೋಷಕುಮಾರ ಇದ್ದರು.