ಕಾರು ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ ಇಬ್ಬರು ಗಂಭೀರ ಗಾಯ

0
99

ಕಲಬುರಗಿ: ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಹೊರವಲಯದಲ್ಲಿ ಇಂದು ಇನ್ನೋವಾ ಕಾರು ಮತ್ತು ಕೆ.ಎಸ್.ಆರ್ ಟಿ.ಸಿ.ಬಸ್ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

Contact Your\'s Advertisement; 9902492681

ಬದರುಜಾಮಾ ಇನಾಮದಾರ್ ಇವರ ಸಹೋದರ ಖಮರುಜಮ್ಮಾ ಇನಾಮದಾರ್ ಘಟನೆಯಲ್ಲಿ ಗಾಯಗೊಂಡ ಕಾರು ಸವಾರರು, ಇಬ್ಬರೂ ಸಹೋದರು ಕಲಬುರಗಿ ಜಿಲ್ಲೆಯ ಪ್ರತಿಷ್ಠಿತ ಇನಾಮದಾರ ಕಾಲೇಜಿನ ಓನರ್ ಆಗಿದ್ದು,  ಇಂದು ಅಪರಹ್ನ ಇಬ್ಬರು ಸಹೋದರರು ಹೈದಾರಾಬಾದಗೆ ತೆರಳುತಿದ್ದಾಗ ಎದುರಿಂದ ಬಂದ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡಿದ್ದು, ಗಾಯಳುಗಳಿಗೆ ಕಲಬುರಗಿ ಜಿಲ್ಲೆಯ ಯೂನೈಟೆಡ್ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯಲ್ಲಿ ಕಾರು ಸಂಪುರ್ಣವಾಗಿ ನಜ್ಜು ಗುಜ್ಜು ಆಗಿದ್ದು, ಕೆ.ಎಸ್.ಆರ್.ಟಿ.ಸಿ ಬಸ್ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here