ರಾಜಕುಮಾರ ಪಾಟೀಲ ತೇಲ್ಕೂರಗೆ ಸಚಿವ ಸ್ಥಾನ ನೀಡಬೇಕೆಂದು ವಿನೋದ ಓಂಕಾರ ಮನವಿ

0
65

ಚಿಂಚೋಳಿ:ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಸೇಡಂ ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಹೋಡೆಬೀರನಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ವಿನೋದ ಓಂಕಾರ ಮನವಿ ಮಾಡಿದ್ದಾರೆ.

ರಾಜಕುಮಾರ ಪಾಟೀಲ ಅವರು ಎರಡು ಅವಧಿಗೆ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಕೆಲಸ ಮಾಡಿ ಕಲಬುರಗಿ ಜಿಲ್ಲೆಯಲ್ಲಿ ಪಕ್ಷ ಸಂಘಟಿಸಿ ಬೆಳೆಸಿದ್ದಾರೆ, ಅವರ ಅವಧಿಯಲ್ಲಿ ಎರಡು ಬಾರಿ ಕಲಬುರಗಿ ಜಿಪಂ ಅಧ್ಯಕ್ಷ ಸ್ಥಾನ ಬಿಜೆಪಿ ಪಕ್ಷದವರೆ ಅಧ್ಯಕ್ಷರಾಗಿದರು.

Contact Your\'s Advertisement; 9902492681

ಸೇಡಂ ಕ್ಷೇತ್ರದಿಂದ ಸ್ಪರ್ಧಿಸಿ ಚುನಾವಣೆಯಲ್ಲಿ ಗೆಲವು ಸಾದಿಸಿ ಕ್ಷೇತ್ರದಲ್ಲಿ ಹಲವಾರು ಜನ ಪರ ಯೋಜನೆಗಳು ಜಾರಿಗೆ ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದಾರೆ, ಕೊರೊನಾದಂತ ಸಂಕಷ್ಟದಲ್ಲಿ ಕ್ಷೇತ್ರದಲ್ಲಿ ಸಂಚರಿಸಿ ಅಧಿಕಾರಿ ಗಳೊಂದಿಗೆ ನಿರಂತರ ಸಂಪರ್ಕಿಸಿ ಕೊರೊನಾ ನಿಯಂತ್ರಣ ಮಾಡಲು ಸಫಲಾದರು, ಕೊರೊನಾ ಸಂಕಷ್ಟದಲ್ಲಿ ಬಡ ಜನರಿಗೆ ಆಹಾರ ಕೀಟ್ ನೀಡಿದ್ದಾರೆ,ಕ್ಷೇತ್ರದ ಎಲ್ಲಾ ಗ್ರಾಮದಲ್ಲಿ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ.

ಇದರಿಂದ ರಾಜಕುಮಾರ ಪಾಟೀಲ ತೇಲ್ಕೂರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here