ಬರಹಗಾರರ ಬಳಗ: ನೂತನ ಪದಾಧಿಕಾರಿಗಳ ಆಯ್ಕೆ

0
23

ಕಲಬುರಗಿ: ಇಲ್ಲಿಯ ಸಾರ್ವಜನಿಕ ಉದ್ಯಾನವನದ ಆವರಣದಲ್ಲಿ ನಡೆದ ಕಲಬುರಗಿ ಜಿಲ್ಲಾ ಬರಹಗಾರರ ಬಳಗದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು ಎಂದು ಸಂಚಾಲಕ ಧರ್ಮಣ್ಣ ಧನ್ನಿ ತಿಳಿಸಿದ್ದಾರೆ.

ನೂತನ ಅಧ್ಯಕ್ಷರಾಗಿ ಮಹಾಂತೇಶ ಎನ್ ಪಾಟೀಲ, ಗೌರವಧ್ಯಕ್ಷ ಬಾಬುಮಿಯಾ ಫುಲಾರಿ, ಸಂಚಾಲಕ ಧರ್ಮಣ್ಣ ಎಚ್ ಧನ್ನಿ, ಉಪಾಧ್ಯಕ್ಷರಾಗಿ ಚಂದ್ರಕಲಾ ಪಾಟೀಲ, ಸಿದ್ದರಾಮ ಸರಸಂಬಿ, ಮಹಾದೇವಿ ಅಷ್ಠಗಿ, ರೇಣುಕಾ ಶ್ರೀಕಾಂತ, ಪ್ರಧಾನ ಕಾರ್ಯದರ್ಶಿಯಾಗಿ ಶರಣರೆಡ್ಡಿ ಕೊಡ್ಲಾ, ಶಿವಲೀಲಾ ಎಸ್ ಕೆ, ಸಂಘಟನಾ ಕಾರ್ಯದರ್ಶಿ ಶಿವಶಂಕರ ಬಿಳಾಲಕರ, ಅನುಸೂಯಾಬಾಯಿ ನಾಗನಳ್ಳಿ, ಸಹ ಕಾರ್ಯದರ್ಶಿ ಎಂ ಪಿ ಪ್ರಕಾಶ ಸರಸಂಬಾ, ಮಲ್ಲಮ್ಮ ಕಾಳಗಿ, ಜಂಟಿ ಕಾರ್ಯದರ್ಶಿ ವೀರಭದ್ರಪ್ಪ ಗುರುಮಿಠಕಲ್, ಸಂಗಮ್ಮ ಧರ್ಮುಕರ, ಖಜಾಂಚಿಯಾಗಿ ಗಂಗಮ್ಮ ನಾಲವಾರ, ಹಾಗೂ ಸಲಹೆಗಾರರಾಗಿ ಅಮರಾವತಿ ಹಿರೇಮಠ, ನೀಲಾವತಿ ಪಾಟೀಲ ಅವರನ್ನು ಆಯ್ಕೆ ಮಾಡಲಾಯಿತು. ಬಳಗದ ರಾಜ್ಯ ಸಮಿತಿ ಸಂಚಾಲಕ ರವಿಕುಮಾರ ನಂದಗೇರಿ ಅಧ್ಯಕ್ಷತೆ ವಹಿಸಿದರು.

Contact Your\'s Advertisement; 9902492681

ಬರುವ ದಿನಗಳಲ್ಲಿ ಕಲಬುರಗಿ ಜಿಲ್ಲೆ ಎಲೆ ಮರೆಯ ಕಾಯಿಯಂತ್ತಿರುವ ಕಲಾವಿದರು, ಬರಹಗಾರರನ್ನು ಗುರುತಿಸಿ ಬಳಗದ ಕಾರ್ಯಕ್ರಮಗಳಲ್ಲಿ ಅವಕಾಶ ನೀಡಲಾಗುವುದು. ಶೀಘ್ರವೇ ಪದಗ್ರಹಣ ಸಮಾರಂಭ ಏರ್ಪಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here