ಕಲಬುರಗಿ: ವೀರಶೈವ ಕಲ್ಯಾಣ ಮಂಟಪದಲ್ಲಿ ವೀರಶೈವ ಸಮಾಜದ ಪ್ರಮುಖರ ಸಭೆಯಲ್ಲಿ ವೀರಶೈವ ಸಮಾಜ ಜಿಲ್ಲೆಯಲ್ಲಿ ಬಲಿಷ್ಠ ಗೊಳಿಸುವ ನಿಟ್ಟಿನಲ್ಲಿ, ಕಾಳಗಿ ತಾಲೂಕಿನ ಅಧ್ಯಕ್ಷರಾಗಿ ರೇವಣಸಿದ್ದ ಬಡಾ, ಉಪಾಧ್ಯಕ್ಷರಾಗಿ ಸಿದ್ದರಾಮ ಎಸ್. ಪಾಟೀಲ, ಪ್ರಧಾನ ಕಾರ್ಯದರ್ಶಿಗಳಾಗಿ ಸುನೀಲಕುಮಾರ ಸಿ. ಮಂತಟ್ಟಿ ಕಾರ್ಯದರ್ಶಿಯಾಗಿ ಬಸವರಾಜ ಪಾಟೀಲ ತೇಗಲತಿಪ್ಪಿ ಇವರುಗಳನ್ನು ಸರ್ವಾನುಮತದಿಂದ ಆಯ್ಕೆಮಾಡಿ ಸಮಾಜ ಬಲ ಪಡಿಸಲು ಕಲ್ಯಾಣಪ್ಪಾ ಪಾಟೀಲ ಮಳಖೇಡ ಕರೆ ನೀಡಿದರು.
ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ ಮಾತನಾಡಿ ತಾಲೂಕಿನ ಪ್ರತಿ ಮನೆ ಮನೆಗೂ ಸರಸ್ಯತ್ವ ಮಾಡಿ ಸ್ವಾಭಿಮಾನದಿಂದ ಸಘಟನೆ ಮಾಡಲು ಹೇಳಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಘೂಳಿ, ಸದಸ್ಯರಾದ ಬಸವರಾಜ ಯಾಲಕ್ಕೆ, ರಮೇಶ ಪಾಟೀಲ, ಎ.ಬಿ. ಪಾಟೀಲ, ಶಿವಶರಣಪ್ಪಾ ಮುಕರಂಬಿ, ಜಗನಾಥ ಪಟ್ಟಣಶೆಟ್ಟಿ ವೀರು ಪಾಟೀಲ ರಾಯಕೊಡ, ಅಲೋಕ ಸೊರಡೆ, ಮಾಂತೇಶ ಪಾಟೀಲ, ಸೋಮಶೇಖರ ಪಾಟೀಲ, ರಮೇಶ ತಿಪ್ಪನೂರ, ಶರಣಗೌಡ ಸಂಕನೂರ ಮತ್ತಿತರು ಇದ್ದರು.