ಕಲಬುರಗಿ: ನಗರದಲ್ಲಿ ಡೆಂಗ್ಯೂ ಹಾಗೂ ಮಲೇರಿಯಾ ಹರಡುತ್ತಿರುವ ಹಿನ್ನೆಲೆ ಮುಂಜಾಗೃತೆ ವಹಿಸುವಂತೆ ಯುವ ಕಾಂಗ್ರೆಸ್ ಸಮಿತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸಮಿತಿಯ ಅಧ್ಯಕ್ಷ ಶಿವಾನಂದ ಹೋನಗುಂಟಿ, ಡಾ.ಕಿರಣ ದೇಶಮುಖ, ಫಾರುಖ್ ಸೇಟ್, ಈರಣ್ಣಾ ಝಳಕಿ, ಸೈಯದ್ ರಕೀಬ್, ಶರಣು ಕಡಗಂಚಿ, ಶರಣು ಡೋಣಗಾವ, ಪ್ರಕಾಶ ಕಪನೂರ, ಪರಶುರಾಮ ನಾಟೀಕರ, ಅಶ್ವಿನ ಸಂಕಾ, ಅರ್ಷದ ಖಾನ್ ಇದ್ದರು.