ಕಲಬುರಗಿ: ರಂಗಾಯಣ ವತಿಯಿಂದ ರಂಗಾಂತರಾಳ ಕಾರ್ಯಕ್ರಮವನ್ನು ಶನಿವಾರ ಆಗಸ್ಟ್ 7 ರಂದು ಬೆಳಿಗ್ಗೆ 11 ಗಂಟೆಗೆ ಶಹಬಾದ ವರ್ತುಲ ರಸ್ತೆಯ ಸಿದ್ದಯ್ಯ ಪುರಾಣಿಕ ಸಮುಚ್ಛಯದ ರಂಗಾಯಣ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕಲಬುರಗಿಯ ಹಿರಿಯ ರಂಗಕಲಾವಿದರಾದ ದೇವೇಂದ್ರಪ್ಪ ಕಪನೂರ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ರಂಗಾಯಣದ ನಿರ್ದೇಶಕ ಪ್ರಭಾಕರ ಜೋಶಿ ಕಾರ್ಯಕ್ರಮದ ಅಧ್ಯಕ್ಷತೆವಹಿಸುವರು.