ಕಲಬುರಗಿ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮದಿನದ ಅಂಗವಾಗಿ ನಗರದ ಇಎಸ್ಐ ಆಸ್ಪತ್ರೆಯಲ್ಲಿ ಗುರುವಾರ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ಕಾಂಗ್ರೆಸ್ ಗ್ರಾಮೀಣ ಬ್ಲಾಕ್ ಅಧ್ಯಕ್ಷೆ ನಿರ್ಮಲ ಎಸ್ ಬರಗಾಲಿ ಹಾಗೂ ಕಾಂಗ್ರೆಸ್ ಮುಖಂಡ ವಿಜಯಕುಮಾರ್ ಜಿ ರಾಮಕೃಷ್ಣ ಇವರುಗಳನೇತೃತ್ವದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶರಣಬಸಪ್ಪ ಹಾಗರಗಿ, ರಾಜಕುಮಾರ ಎಚ್ ಕಪನೂರ, ಪರಮೇಶ್ವರ ಭಟ್ಟರಕಿ, ಆನಂದ ಪವರ, ನಾರಾಯಣಪುರ ಪವರ್, ಪ್ರಭುಲಿಂಗ ಹಿರಾ, ದಯಾನಂದ ಸಪ್ಪನ, ವಿಜಯಕುಮಾರ, ರಾಹುಲ, ಆನಂದ ಪಾಟೀಲ, ನಾಗರಾಜ ಭಾವಿದೊಡ್ಡಿ, ಸುಭಾಷ ಕೋರೆ ಹಾಗೂ ಕುಸನೂರ ಗ್ರಾಮದ ಯುವ ಮುಖಂಡರು ಇದ್ದರು.