ಕೇಂದ್ರ ಸಚಿವರ ಹುಟ್ಟು ಹಬ್ಬಕ್ಕೆ ಹಾಲು ಹಣ್ಣ ವಿತರಣೆ

0
52

ಸುರಪುರ: ಕೇಂದ್ರ ಸಚಿವರು ಹಾಗು ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷರಾದ ರಾಮ್ ವಿಲಾಸ್ ಪಾಸ್ವನರ ಜನ್ಮ ದಿನದ ಅಂಗವಾಗಿ ದಲಿತ ಸೇನೆ ಹಾಗು ಲೋಕ ಸನಶಕ್ತಿ ಪಕ್ಷದಿಂದ ಹಾಲು ಹಣ್ಣು ಮತ್ತು ಬ್ರೇಡ್ ವಿತರಿಸುವ ಮೂಲಕ ಆಚರಿಸಲಾಯಿತು.

Contact Your\'s Advertisement; 9902492681

ದಲಿತ ಸೇನೆಯ ತಾಲ್ಲೂಕು ಅಧ್ಯಕ್ಷರಾದ ನಿಂಗಣ್ಣ ಗೋನಾಲ ನೇತೃತ್ವದಲ್ಲಿ ನಗರದ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಹಾಲು ವಿತರಿಸಿದರು.ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಹರ್ಷವರ್ಧನ ರಫಗಾರ,ದಲಿತ ಸೇನೆಯ ಮುಖಂಡರಾದ ಮಾನಪ್ಪ ಝಂಡದಕೇರಾ,ಪರಮಣ್ಣ ಹಂದ್ರಾಳ,ಶಿವಣ್ಣ ನಾಗರಾಳ,ಬನ್ನಪ್ಪ ಕೋನಾಳ,ಆನಂದ ಕೋನಾಳ,ಮುತ್ತಣ್ಣ ಕೋನಾಳ ಇದ್ದರು.

ಅದೇರೀತಿಯಾಗಿ ಲೋಕ ಜನಶಕ್ತಿ ಪಕ್ಷದ ಯಾದಗಿರಿ ಜಿಲ್ಲಾಧ್ಯಕ್ಷ ಅಪ್ಪಾರಾವ್ ನಾಯಕ ಸತ್ಯಂಪೇಟೆ ನೇತೃತ್ವದಲ್ಲಿ ತಿಮ್ಮಾಪುರದ ಸರಕಾರಿ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಬ್ರೇಡ್,ಹಾಲು,ಹಣ್ಣು ವಿತರಿಸಿದರು.ಮಹ್ಮದ ರಫೀಕ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here