Monday, July 15, 2024
ಮನೆಬಿಸಿ ಬಿಸಿ ಸುದ್ದಿನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಕಾಮಗಾರಿ ಪರಿಶೀಲನೆ

ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಕಾಮಗಾರಿ ಪರಿಶೀಲನೆ

ಶಹಾಬಾದ: ನಗರದ ಹೊನಗುಂಟಾ ರಸ್ತೆಯಲ್ಲಿ ನಗರಸಭೆಯಿಂದ ಕೈಗೊಳ್ಳಲಾದ ಚರಂಡಿ ಕಾಮಗಾರಿಯನ್ನು ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಅವರಿ ಪರಿಶೀಲಿಸಿದರು.

ನಂತರ ಮಾತನಾಡಿದ ಅವರು, ಈಗಾಗಲೇ 15ನೇ ಹಣಕಾಸು ಯೋಜನೆಯಲ್ಲಿ ಸುಮಾರು 30 ಲಕ್ಷ ರೂ. ಅನುದಾನದಲ್ಲಿ ಚರಂಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಬಹುತೇಖ ಕಾಮಗಾರಿ ಮುಗಿಯುವತ್ತ ಬಂದಿದೆ. ನಗರದಲ್ಲಿ ಇಷ್ಟೊಂದು ವೈಜ್ಞಾನಿಕವಾಗಿ ಅಚ್ಚುಕಟ್ಟಾದ ಚರಂಡಿ ನಿರ್ಮಾಣ ಮಾಡಿರುವುದು ನೋಡಿ ಜೆಇ ಮೌಲಾಲಿ ಹಾಗೂ ಗುತ್ತಿಗೆದಾರರ ಕೆಲಸಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿದರು. ಸಾರ್ವಜನಿಕರು ಚರಂಡಿ ಕಾಮಗಾರಿಯನ್ನು ಕಂಡು ಇದೇ ರೀತಿ ನಗರದಲ್ಲೆಡೆ ಚರಂಡಿ ನಿರ್ಮಾಣವಾದರೆ ಉತ್ತಮವಾಗುತ್ತದೆ ಎಂದು ಹೇಳುತ್ತಿದ್ದಾರೆ.

ಮುಂಬರುವ ದಿನಗಳಲ್ಲಿ ಉತ್ತಮ ಚರಂಡಿ ಹಾಗೂ ರಸ್ತೆ ನಿರ್ಮಾಣ ಕೈಗೊಂಡು ಉತ್ತಮ ನಗರವನ್ನಾಗಿ ಮಾಡುವ ಸಂಕಲ್ಪ ನಮ್ಮದಾಗಿದೆ.ಅಲ್ಲದೇ ಸಾರ್ವಜನಿಕರು ಕೋವಿಡ್ ಇನ್ನು ಹೊರಟು ಹೋಗಿಲ್ಲ. ಆದ್ದರಿಂದ ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಯಾವುದಕ್ಕೂ ಅಸಡ್ಡೆ ತೋರದೇ ನಿಮ್ಮ ಆರೋಗ್ಯವನ್ನು ನಿವೇ ಕಾಪಾಡಿಕೊಳ್ಳುವತ್ತ ಗಮನಹರಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕ ಶೀವರಾಜಕುಮಾರ, ಗುತ್ತಿಗೆದಾರರು ಹಾಗೂ ಇತರರು ಇದ್ದರು.

advertisement
advertisement

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular