ಕಲಬುರಗಿ: ಶಿಕ್ಷಕರು ದೇಶದಉತ್ತಮ ನಾಗರಿಕರನ್ನುತಯಾರಿಸುವ ಶಿಲ್ಪಿಗಳು.ಗುರು, ಗೋವಿಂದಇಬ್ಬರುಎದುರು ಬಂದಾಗಗುರುವಿನ ಆರ್ಶೀವಾದವೇ ಮೊದಲು ಬೇಕು ಏಕೆಂದರೆಗೋವಿಂದನದರ್ಶನಕ್ಕೆ ಮಾರ್ಗತೋರಿಸುವನೆಗುರು ಶಿಕ್ಷಕರು ಸದೃಢದೇಶದ ನಿರ್ಮಾಪಕರುಆದರೆಅಂತಹ ಶಿಕ್ಷಕರು ಉತ್ತಮಕಾರ್ಯನಿರ್ವಹಿಸಲು ರೋಟರಿಕ್ಲಬ್ನಂತಹ ಸಂಸ್ಥೆಗಳು ಗುರುತಿಸಿ ಕೊಡುವಇಂತಹ ಪ್ರಶಸ್ತಿಗಳು ಇನ್ನೂ ಹೆಚ್ಚಿನಕಾರ್ಯನಿರ್ವಹಿಸಲಿಕ್ಕೆ ಪ್ರೇರಣೆ ನೀಡುತ್ತವೆಎಂದು ನೂತನ ವಿದ್ಯಾಲಯ ಪಾಲಿಟೆಕ್ನಿಕ್ಕಾಲೇಜಿನಗಣಿತ ಪ್ರಾಧ್ಯಾಪಕರಾದ ಪ್ರೊ. ಆರ್.ಕೆ. ಕುಲಕರ್ಣಿ ತಿಳಿಸಿದರು.
ಅವರುರೋಟರಿಕ್ಲಬ್ಉತ್ತರ ವಲಯವು ನಗರದ ಪಬ್ಲಿಕ್ಗಾರ್ಡನಲ್ಲಿರುವರೋಟರಿ ಶಾಲೆಯ ಪಾಲ್ ಹ್ಯಾರಿಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಮತ್ತು ನೆಷನ್ ಬಿಲ್ಡರ್ಸ್ ಪ್ರಶಸ್ತಿ ಪ್ರಧಾನಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತರಾಗಿ ಮಾತನಾಡುತ್ತಿದ್ದರು.
ಶರಭಯ್ಯಗಾದಾಕನ್ಯಾ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕಿ ಪುಷ್ಪಾ ಯಳವಂಜಿ, ಕೆನಬ್ರಿಜ್ ಮುಖ್ಯಗುರುಗಳಾದ ನೀತಾ ಪುರೋಹಿತ ವಿದ್ಯಾನಿಕೇತನ ಶಾಲೆಯ ಶಿಕ್ಷಕರಾದ ಪ್ರಕಾಶಕುಲಕರ್ಣಿ, ಸರ್ದಾರ ವಲ್ಲಭ ಬಾಯಿ ಮೆಮರಿಯಲ್ ಶಾಲೆಯ ಶಿಕ್ಷಕರಾದ ರಮೇಶ ಬಲ್ದವಾ, ನೂತನ ವಿದ್ಯಾಲಯ ಪಾಲಿಟೆಕ್ನಿಕ್ಕಾಲೇಜಿನಗಣಿತ ಪ್ರಾಧ್ಯಾಪಕರಾದ ಪ್ರೊ. ಆರ್.ಕೆ. ಕುಲಕರ್ಣಿರವರಿಗೆ ನೆಶನ್ ಬಿಲ್ಡರ್ಸ್ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಡಾ. ನಾಗನಾಥಗಚ್ಚಿನಮನಿ ಪ್ರಾರ್ಥಿಸಿದರು, ರೋಟರಿಕ್ಲಬ್ಉತ್ತರ ವಲಯಅಧ್ಯಕ್ಷರಾದ ರಾಮಕೃಷ್ಣ ಬೋರಾಳಕರ ಸ್ವಾಗತಿಸಿದರು. ನೂತನ ವಿದ್ಯಾಲಯ ಸಂಸ್ಥೆಯಅಧ್ಯಕ್ಷರಾದ ಪಿ.ಡಿ.ಜಿ. ಡಾ.ಗೌತಮಜಹಗೀರದಾರ ಮುಖ್ಯ ಅತಿಥಿಗಳಾಗಿ ಶಿಕ್ಷಕರ ದಿನಾಚರಣೆಕುರಿತು ಮಾತನಾಡಿದ್ದರು.
ಅತಿಥಿಗಳಾಗಿ ನಿಯೋಜಿತರೋಟರಿ ೩೧೬೦ ಜಿಲ್ಲೆಯಗವರ್ನರಆದ ಮಾಣಿಕ ಪವಾರರವರು ಆಗಮಿಸಿ ರೋಟರಿಕ್ಲಬ್ಕುರಿತು ವಿವರಿಸಿದ್ದರು. ಅಸಿಸ್ಟೆಂಟ್ ಗವರ್ನರ ಜಯಕುಮಾರ ಮಾಡಗಿ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯದರ್ಶಿಗಳಾದ ಡಾ.ಬಾಬುರಾವ ಶೇರಿಕಾರ ಪ್ರಾಸ್ತಾವಿಕ ಮಾತನಾಡಿದ್ದರು. ಜಂಟಿ ಕಾರ್ಯದರ್ಶಿ ಸುಭಾಷಖಣಗೆ ವಂದಿಸಿದರು.
ಕಾರ್ಯಕ್ರಮದಲ್ಲಿಉಪಹಾರ ಸೇವೆಗೈದ ಹಿರಿಯಉದ್ಯಮಿಯಾದ ಸಂಜುಎಲ್. ಗುಪ್ತಾರನ್ನು ಸನ್ಮಾನಿಸಲಾಯಿತು. ಖ್ಯಾತ ವ್ಯದ್ಯರಾದ ಡಾ.ಕೆ.ಶ್ರೀರಾಮ ಮೂರ್ತಿರೋಟರಿ ಕ್ಲಬ್ ಉತ್ತರ ವಲಯಕ್ಕೆ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು. ರಮೇಶ ವಗದರ್ಗಿರವರು ಅತಿಥಿ ಮತ್ತು ಪ್ರಶಸ್ತಿ ವಿಜೇತರನ್ನು ಪರಿಚಯಿಸಿದರು.
ಕಾರ್ಯಕ್ರಮದಲ್ಲಿದೇವಿಂದ್ರ ಸಿಂಗ ಚವ್ಹಾಣ, ಪ್ರಶಾಂತ ಮಾನಕರ, ರಾಮ ಶಾನಬೋಗ, ದಿನೇಶ ಪಾಟೀಲ, ಶಾಮ ಜೋಷಿ, ಸಂಜಯ ಆರ್.ಕೆ. ಉಮಾಗಚ್ಚಿನಮನಿ, ರಾಜೇಂದ್ರ ಹೇರೂರಕರ, ಗೋಪಾಲ ಮಳಖೇಡಕರ್, ಶರಣಬಸಪ್ಪ ಪಾಟೀಲ ಆಳಂದ, ಉಪಸ್ಥಿತರಿದ್ದರು.
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…